ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಕಳೆದುಕೊಂಡ ಬಿಎಸ್‌ವೈ: ಕಣ್ಣೀರಿಟ್ಟ ಸಂಸದ ಪ್ರತಾಪ್ ಸಿಂಹ

Last Updated 19 ಮೇ 2018, 15:01 IST
ಅಕ್ಷರ ಗಾತ್ರ

ಬೆಂಗಳೂರು: 2014ರಲ್ಲಿ ನಾನು ತುಂಬಾ ಖುಷಿಯಾಗಿದ್ದೆ, ಈಗ ತುಂಬಾ ದುಃಖದಿಂದ ಕಣ್ಣೀರು ತಡ್ಕೊಳ್ಳಕ್ಕಾಗುತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಫೇಸ್‍ಬುಕ್ ಲೈವ್‍ನಲ್ಲಿ ಕಣ್ಣೀರು ಸುರಿಸಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಗದ್ಗದಿತರಾಗಿ ಮಾತನಾಡಿದ ಪ್ರತಾಪ್, 1995-96ರಲ್ಲಿ ವಾಜಪೇಯಿ ಅವರು ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ನಡೆಯಬೇಕಾಗಿ ಬಂದಾಗ ನಾನು ಅತ್ತಿದ್ದೆ. ಇದೀಗ 22 ವರ್ಷಗಳ ನಂತರ ಹಾಗನಿಸುತ್ತಿದೆ. ಅಧಿಕಾರ ಹೋಯ್ತು ಅಂತ ಬೇಸರ ಆಗ್ತಿಲ್ಲ. ನಾಲ್ಕು ವರ್ಷಗಳಲ್ಲಿ ಯಡಿಯೂರಪ್ಪ ಅವರನ್ನು ಹತ್ತಿರದಿಂದ ನೋಡುವ ಅವರ ಮಾತುಗಳನ್ನು ಕೇಳುವ ಅವಕಾಶ ನನಗೆ ಸಿಕ್ಕಿದೆ. ಎಲ್ಲರೂ ಅವರನ್ನು ಕೋಪಿಷ್ಠ ಅಂತ ಭಾವಿಸುತ್ತಾರೆ. ಅವರ ಕೋಪದ ಹಿಂದೆ ಸಾತ್ವಿಕ ಕಾರಣಗಳಿವೆ. ನಾನು ಹಲವಾರು ಪೊಲಿಟಿಷನ್ ಜತೆ ಮಾತನಾಡಿದ್ದೀನಿ. ಕೆಲವರ ಜತೆ ಪಾರ್ಟಿ ಕೂಡಾ ಮಾಡಿದ್ದೀನಿ. ಆದರೆ ಸದಾ ಜನರ ಬಗ್ಗೆ ಯೋಚಿಸುವಂತ ರಾಜಕಾರಣಿಯನ್ನು ನಾನು ನೋಡಿಲ್ಲ. ಮೋದಿಯವರನ್ನು ಬಿಟ್ಟರೆ ಯಡಿಯೂರಪ್ಪನವರು ಜನರ ಪರ ಯೋಚನೆ ಮಾಡುತ್ತಾರೆ. ಅವರ ಒಳ್ಳೆಯತನವನ್ನು ಯಾರೋ ದುರಪಯೋಗ ಪಡಿಸಿಕೊಂಡು ಕೆಟ್ಟ ನಡೆ ಆದರೇ ಹೊರತು ಅವರು ಒಳ್ಳೆಯವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT