ಬೆಂಗಳೂರು: ‘ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿಲ್ಲ ಎಂದು ಹೆದರದಿರಿ. ನನ್ನ ಚಿಂತೆ ಬಿಡಿ. ಆ ಒಂದು ದಿನ ಬರುತ್ತದೆ. ಸತ್ಯದ ಕಮಲ, ಸಜ್ಜನರ ಮೊಗದಲ್ಲಿ ನಗು ಅರಳುತ್ತವೆ. ಬಿಜೆಪಿ ಮತ್ತೆ ಬರಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಬೆಂಬಲಿಗರನ್ನು ಉದ್ದೇಶಿಸಿ ‘ನಿಮಗಾಗಿ ಬದುಕುವುದೇ ನನ್ನ ಬದುಕು!’ ಎಂಬ ಶೀರ್ಷಿಕೆಯಲ್ಲಿ ಸುದೀರ್ಘ ಬರಹವೊಂದನ್ನು ಬರೆದಿರುವ ಯಡಿಯೂರಪ್ಪ ಅದರ ಲಿಂಕ್ ಅನ್ನು ಟ್ವೀಟ್ನಲ್ಲಿ ನೀಡಿದ್ದಾರೆ.