‘ಕೇರಳದ ಅನೇಕರು ತಾಲ್ಲೂಕಿನಲ್ಲಿ ಬೇಕರಿ, ಹೋಟೆಲ್ಗಳನ್ನು ನಡೆಸುತ್ತಿದ್ದು, ಅನೇಕ ಮಂದಿ ಅಲ್ಲಿಂದಲೇ ಇಲ್ಲಿಗೆ ಸಾಮಗ್ರಿಗಳನ್ನು ತರುತ್ತಾರೆ. ಇಲ್ಲಿಂದ ಕೇರಳಕ್ಕೆ ಜಾನುವಾರು ಸಾಗಣೆಯಾಗುತ್ತದೆ. ಅನೇಕರು ಜೀವನೋಪಾಯಕ್ಕಾಗಿ ಕೇರಳಕ್ಕೆ ಹೋಗಿ ಬರುತ್ತಾರೆ. ಆದರೆ, ವಾಪಸ್ ಬರುವಾಗ ಆರೋಗ್ಯವಂತರಾಗಿಯೇ ಬರುತ್ತೇವೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ನಮ್ಮ ಚೆಕ್ಪೋಸ್ಟ್ಗಳಲ್ಲಿ ಆರೋಗ್ಯ ಇಲಾಖೆಯವರು ಯಾವ ತಪಾಸಣೆಯನ್ನೂ ಮಾಡುತ್ತಿಲ್ಲ’ ಎಂದು ವ್ಯಾಪಾರಿ ಮುಬಾರಕ್ ಬೇಸರ ವ್ಯಕ್ತಪಡಿಸಿದರು.