ನಾನು 1ನೇ ತರಗತಿ ಸೇರುವಾಗ ಕನ್ನಡವನ್ನು ಸಲೀಸಾಗಿ ಓದಿ, ಬರೆಯುವಂತಾಗಿದ್ದೆ. ನನ್ನ ಜೊತೆಗೆ ಇತರ ಮಕ್ಕಳಿಗೂ ಕಲಿಸುತ್ತಾ ನನ್ನ ತಂದೆಯ ಅಗಲಿಕೆಯ ನೋವನ್ನು ಮರೆಯಲು ಅಮ್ಮ ಪ್ರಯತ್ನಿಸಿದರು. ಶಾಲೆಯಲ್ಲಿಯೂ ಉತ್ತಮ ಶಿಕ್ಷಕರು ದೊರೆತರು. ನನಗೆ ಕನ್ನಡವೆಂದರೆ ಅಚ್ಚುಮೆಚ್ಚು. ನಾನು ಒಬ್ಬ ಸಾಹಿತಿಯಾಗಲು ಬಯಸಿದೆ. ಕನ್ನಡ ವ್ಯಾಕರಣದ ಛಂದಸ್ಸು, ಅಲಂಕಾರಗಳು ನನಗೆ ತುಂಬಾ ಹಿಡಿಸಿದವು. ಓದು ಮುಗಿದ ಮೇಲೆ ಕಥೆ,ಕವನಗಳನ್ನು ಬರೆದೆ. ಇದಕ್ಕೆಲ್ಲ ಮೂಲಕಾರಣರಾದ ನನ್ನ ತಾಯಿಯೇ ನನ್ನ ಮೆಚ್ಚಿನ ಶಿಕ್ಷಕಿ.