ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಈ ಮೂವರು ಮಹತೊ ಮೇಲೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಮಹತೊ ಒಪ್ಪದಿದ್ದಾಗ, ಮಹತೊ ಮನೆಗೆ ಜಗತ್ ರಾಯ್ ಬೆಂಕಿ ಹಚ್ಚಿದ್ದ. ಇದರ ಪರಿಣಾಮ ಮಹತೊ ಪತ್ನಿ, ಐವರು ಮಕ್ಕಳು ಸಜೀವವಾಗಿ ದಹನವಾದರೆ, ಸುಟ್ಟ ಗಾಯಗಳಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮಹತೊ ಕೆಲ ತಿಂಗಳ ನಂತರ ಸಾವನ್ನಪ್ಪಿದ್ದರು.