ಬೆಂಗಳೂರು, ಜೂನ್ 8– ಕೃಷ್ಣಾ–ಗೋದಾವರಿ ನೀರು ಹಂಚಿಕೆ ವಿವಾದವನ್ನು ಪಂಚಾಯಿತಿಗೊಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರದ ನೀರಾವರಿ ಮತ್ತು ವಿದ್ಯುಚ್ಛಕ್ತಿ ಮಂತ್ರಿಗೆ ತಾವು ಸೂಚನೆ ನೀಡಿರುವುದಾಗಿ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಪ್ರಧಾನಿಯವರ ಈ ಸೂಚನೆಯಿಂದ ಮೈಸೂರಿನ ದೀರ್ಘಕಾಲದ ಒತ್ತಾಯಕ್ಕೆ ಪುರಸ್ಕಾರ ದೊರೆತಂತಾಗಿದೆ.