ಬಸವಕಲ್ಯಾಣ ಪಟ್ಟಣದ ಸತ್ಯನಾರಾಯಣ ಓಣಿ, ಕೈಕಾಡಿ ಓಣಿ, ತಾಜ್ ಕಾಲೊನಿಯಲ್ಲಿನ ಕೆಲ ಮನೆಗಳ ಸುತ್ತ ಮಳೆ ನೀರು ಸಂಗ್ರಹಗೊಂಡಿದೆ. ಜ್ಞಾನಪ್ರಿಯ ಪ್ರೌಢಶಾಲೆ ಹಿಂದಿನ ಮನೆಗಳಿಗೆ ಹೋಗಲು ದಾರಿ ಇಲ್ಲದಂತಾಗಿ ಸಾರ್ವಜನಿಕರು ಪರದಾಡಬೇಕಾಯಿತು. ನಾರಾಯಣಪುರ ಕ್ರಾಸ್ನಿಂದ ಬಸ್ ನಿಲ್ದಾಣಕ್ಕೆ ಮತ್ತು ತ್ರಿಪುರಾಂತದಿಂದ ಡಾ.ಅಂಬೇಡ್ಕರ್ ವೃತ್ತಕ್ಕೆ ಹೊಗುವ ರಸ್ತೆಯಲ್ಲಿ ಅಲ್ಲಲ್ಲಿ ನೀರು ನಿಂತು ತೊಂದರೆಯಾಯಿತು.