ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್, ಅಶ್ವಿನ್ ರಾವ್ ಪಲ್ಲಕ್ಕಿ, ಪ್ರಕಾಶ್ ತೂಮಿನಾಡ್, ಶ್ರೇಯಾ ಅಂಚನ್ ಈ ಚಿತ್ರದಲ್ಲಿ ಇದ್ದಾರೆ. ಉಡುಪಿ, ಮೈಸೂರು, ಬೆಂಗಳೂರು, ಪುದುಚೇರಿ, ಮುನ್ನಾರ್ನಲ್ಲಿ ಚಿತ್ರೀಕರಣ ನಡೆದಿದೆ. ‘ಈ ಚಿತ್ರವು ವೀಕ್ಷಕರಿಗೆ ಒಂದಿಷ್ಟು ಭಾವುಕ ಕ್ಷಣಗಳನ್ನು ಕಟ್ಟಿಕೊಡುತ್ತದೆ’ ಎನ್ನುವುದು ನಿರ್ದೇಶಕ ಸೆನ್ನಾ ಅವರ ಹೇಳಿಕೆ.