ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಳಲನ್ನು ತೋಡಿಕೊಂಡ ಗ್ರಾಮದ ಮುಖಂಡ ಜಿ.ವಿ. ಮಂಜುನಾಥ, ‘ಗ್ರಾಮದಲ್ಲಿ ಸುಮಾರು 2,000 ಜನಸಂಖ್ಯೆ ಇದೆ. ಮೇಲ್ಸೇತುವೆಗೆ ಅಡ್ಡವಾಗಿ ಸ್ಲ್ಯಾಬ್ ಹಾಕಿರುವುದರಿಂದ ಕೆಳಗಿನಹಟ್ಟಿ ತಾಂಡಾ ಎರಡು ಭಾಗವಾಗಿದೆ. ಪ್ರತಿ ತಿಂಗಳು ಗ್ರಾಮಕ್ಕೆ ಬರುವ ಪಡಿತರದ ಲಾರಿಯೂ ಅಂಗಡಿ ಬಳಿ ಬರಲು ಆಗದ ಸ್ಥಿತಿ ನಿರ್ಮಾಣಗೊಂಡಿದೆ. ಸುಮಾರು 200 ವರ್ಷಗಳ ಹಳೆಯ ಸೇವಾಲಾಲ್ ದೇವಸ್ಥಾನವಿದ್ದು, ಅದಕ್ಕೆ ವಾಹನದಲ್ಲಿ ತೆರಳಲು ಆಗುತ್ತಿಲ್ಲ. ಗ್ರಾಮದಲ್ಲಿ ಸುಮಾರು 30 ಟ್ರ್ಯಾಕ್ಟರ್, ಲಾರಿಗಳಿದ್ದು, ಅವುಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ’ ಎಂದು ದೂರಿದರು.