ಪ್ರಧಾನ ಕಾರ್ಯದರ್ಶಿ ಡಾ.ಪ್ರಭುರಾಜ ನಾಯಕ ಮಾತನಾಡಿ, ಮೀಸಲಾತಿ ಎನ್ನುವುದು ಆರ್ಥಿಕ ಹಿಂದುಳಿದಿರುವಿಕೆಗೆ ಸಂಬಂಧಿಸಿಲ್ಲ. ಅದು ಸಾಮಾಜಿಕತೆಗೆ ಸಂಬಂಧಿಸಿದೆ. ಈ ದೇಶದಲ್ಲಿ ವರ್ಣ ವ್ಯವಸ್ಥೆ, ಜಾತಿ ಆಧರಿಸಿರುವ ಶ್ರೇಣಿಕೃತ ವ್ಯವಸ್ಥೆ ಇದೆ. ಆದ್ದರಿಂದ ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾಗಿರುವ ವರ್ಗಗಳು ಅಕ್ಷರ, ಉದ್ಯೋಗ, ಭೂಮಿ, ಮತ್ತಿತರ ಹಕ್ಕುಗಳಿಂದ ದೂರ ಇಡಲ್ಪಟ್ಟಿದ್ದವು. ಡಾ ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನೆಯಾದ ನಂತರ ಈ ವರ್ಗಗಳ ಹಿತರಕ್ಷಣೆಗೆ ಕಾನೂನು ಅಸ್ತಿತ್ವಕ್ಕೆ ಬಂದಿವೆ ಎಂದು ಹೇಳಿದರು.