ಹಲವರು ಪೊಲೀಸ್ ಠಾಣೆಯ ಸೆಲ್ನಲ್ಲಿ ಇರುವ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪೊಲೀಸ್ ಅಧಿಕಾರಿಗಳು, ಸೆಲ್ನಲ್ಲಿ ಇರುವ ವ್ಯಕ್ತಿಗಳಿಗೆ ಲಾಠಿಯಿಂದ ಹೊಡೆಯುತ್ತಿರುವ ದೃಶ್ಯಗಳೂ ಆ ವಿಡಿಯೊದಲ್ಲಿ ಇವೆ. ಈ ವಿಡಿಯೊ ಜತೆಗೆ, ‘ನೋಡಿ, ಮೀರಾ ರೋಡ್ನಲ್ಲಿ ದಾಂದಲೆ ನಡೆಸಿದವರನ್ನು ಪೊಲೀಸರು ಕಂಬಿಗಳ ಹಿಂದೆ ತಳ್ಳಿದ್ದಾರೆ. ಅವರಿಗೆ ಸರಿಯಾಗಿ ಕಜ್ಜಾಯವನ್ನೂ ಕೊಡುತ್ತಿದ್ದಾರೆ’ ಎಂಬ ಸಂದೇಶವನ್ನೂ ಹಂಚಿಕೊಳ್ಳಲಾಗುತ್ತಿದೆ. ಇನ್ನೂ ಕೆಲವರು, ರಾಮ ಮಂದಿರ ಲೋಕಾರ್ಪಣೆಯ ದಿನ ಗಲಭೆ ನಡೆಸಿದ, ಪ್ರತಿಭಟಿಸಿದ ‘ಅವರಿಗೆ’ ತಕ್ಕ ಶಾಸ್ತಿಯಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇದು ತಿರುಚಲಾದ ಮಾಹಿತಿ.