ಎನ್ಸಿಆರ್ಬಿ ವಾರ್ಷಿಕ ವರದಿಗಳ ಪ್ರಕಾರ, 2017ರಿಂದ 2021ರ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ35,040 ಗಲಭೆ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 35 ಕೋಮುಗಲಭೆ ಪ್ರಕರಣಗಳು ಸೇರಿವೆ. ಆದರೆ, 2017ಕ್ಕೆ ಹೋಲಿಸಿದರೆ, 2021ರಲ್ಲಿ ಗಲಭೆ ಪ್ರಕರಣಗಳ ಪ್ರಮಾಣ ಶೇ 41ರಷ್ಟು ಇಳಿಕೆಯಾಗಿದೆ ಎಂದು ವರದಿಗಳು ಹೇಳುತ್ತವೆ. ಆದರೆ ಯೋಗಿ ಅವರು ಒಂದೂ ಪ್ರಕರಣ ವರದಿಯಾಗಿಲ್ಲ ಎಂಬುದು ತಪ್ಪು ಮಾಹಿತಿ ಎಂದು ‘ಸ್ಕ್ರಾಲ್’ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.