‘ದೇಶದಲ್ಲಿ ಮುಸ್ಲಿಮರು, ಕ್ರೈಸ್ತಧರ್ಮೀಯರು ಮತ್ತು ಬೌದ್ಧರು ಹಬ್ಬಗಳನ್ನು ಆಚರಿಸುವುದನ್ನು ಆಯಾ ಧರ್ಮದ ಗುರುಗಳು ನಿರ್ಧರಿಸುತ್ತಾರೆ. ಆದರೆ ಹಿಂದೂಗಳ ಹಬ್ಬವನ್ನು ನ್ಯಾಯಾಲಯಗಳು ನಿರ್ಧರಿಸುತ್ತವೆ. ಇದು ತಾರತಮ್ಯವಲ್ಲವೇ? ಇದಕ್ಕೆ ಕಾರಣವಾಗಿರುವ ಸಂವಿಧಾನದ25, 26, 27, 28, 29, 30 ಮತ್ತು 31ನೇ ವಿಧಿಗಳಿಗೆ ತಿದ್ದುಪಡಿ ತರಬೇಕು. ಸಂವಿಧಾನಕ್ಕೆ ತಿದ್ದುಪಡಿ ತರಬೇಕು’ ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ಮಾಡಿದ್ದಾರೆ ಎನ್ನಲಾದ ಟ್ವೀಟ್ನ ಸ್ಕ್ರೀನ್ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.@RanjanGogoii ಮತ್ತು@SGBJP ಎಂಬ ಹ್ಯಾಂಡ್ಲರ್ಗಳಿಂದ ಈ ಟ್ವೀಟ್ ಮಾಡಲಾಗಿದೆ. ಎರಡೂ ಹ್ಯಾಂಡ್ಲರ್ಗಳಲ್ಲಿ ರಂಜನ್ ಗೊಗೊಯಿ ಅವರ ಹೆಸರು ಮತ್ತು ಚಿತ್ರವಿದೆ.