<p><strong>ಬೆಂಗಳೂರು:</strong> ₹1000 ಕೋಟಿ ಅಬಕಾರಿ ಕಿಕ್ಬ್ಯಾಕ್ ಹಗರಣದಿಂದ ಜನರ ಗಮನ ಬೇರೆಡೆ ಸೆಳೆಯಲು ಡಿಎಂಕೆ ಸರ್ಕಾರ ರೂಪಾಯಿ(₹) ವಿವಾದ ಭುಗಿಲೆಬ್ಬಿಸಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಶುಕ್ರವಾರ ಆರೋಪ ಮಾಡಿದ್ದಾರೆ.</p>.<p>ಜಯನಗರದ ಜೈನ್ ಡೀಮ್ಡ್ ವಿಶ್ವ ವಿದ್ಯಾಲಯದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅಣ್ಣಾಮಲೈ ರೂಪಾಯಿ ಚಿಹ್ನೆಯ ಕುರಿತಂತೆ ತಮಿಳುನಾಡಿನಲ್ಲಿ ಉದ್ದೇಶ ಪೂರ್ವಕವಾಗಿಯೇ ವಿವಾದ ಸೃಷ್ಟಿಸಲಾಗುತ್ತಿದೆ ಎಂದರು.</p>.<p>ಕೇಂದ್ರ ಸರ್ಕಾರ ಅಳವಡಿಸಿಕೊಂಡಿರುವ ₹ ಚಿಹ್ನೆಯ ಬದಲಿಗೆ ತಮಿಳುನಾಡು ಸರ್ಕಾರ ಶುಕ್ರವಾರ ಮಂಡಿಸಿದ ತನ್ನ ಬಜೆಟ್ನಲ್ಲಿ ತಮಿಳಿನ ‘ರೂ’ ಪದವನ್ನು ಬಳಕೆ ಮಾಡಿದೆ.</p>.<p>ಜಾರಿ ನಿರ್ದೇಶನಾಲಯ(ಇಡಿ) ತಮಿಳುನಾಡಿನ ಟಿಎಎಸ್ಎಮ್ಎಸಿಯಲ್ಲಿ (ಸರ್ಕಾರಿ ಆಡಳಿತದ ಮದ್ಯ ಮಾರಾಟ ನಿಗಮ) ₹1000 ಕೋಟಿ ಅಬಕಾರಿ ಕಿಕ್ಬ್ಯಾಕ್ ಪತ್ತೆ ಮಾಡಿದೆ.ಇದರಿಂದ ಜನರ ಗಮನ ಬೇರೆಡೆ ಸೆಳೆಯಲು ತಮಿಳುನಾಡು ಸರ್ಕಾರ ₹ ವಿವಾದ ಎಬ್ಬಿಸಿದೆ ಎಂದರು.</p>.<p>ತಮಿಳುನಾಡು ಸರ್ಕಾರದ ಬಜೆಟ್ ಕಣ್ಣೊರೆಸುವ ತಂತ್ರವಾಗಿದೆ. ಕಳೆದ ನಾಲ್ಕು ಬಜೆಟ್ಗಳಿಗೆ ಹೋಲಿಸಿದರೆ ಈ ವರ್ಷದ ಬಜೆಟ್ನಲ್ಲಿ ಏನೇನೂ ಇಲ್ಲ. ಹೀಗಾಗಿ ಬಿಜೆಪಿಯ ನಾಲ್ವರು ಶಾಸಕರು ಸದನದಲ್ಲಿ ಸಭಾತ್ಯಾಗ ಮಾಡಿದ್ದಾರೆ ಎಂದು ಅಣ್ಣಾಮಲೈ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ₹1000 ಕೋಟಿ ಅಬಕಾರಿ ಕಿಕ್ಬ್ಯಾಕ್ ಹಗರಣದಿಂದ ಜನರ ಗಮನ ಬೇರೆಡೆ ಸೆಳೆಯಲು ಡಿಎಂಕೆ ಸರ್ಕಾರ ರೂಪಾಯಿ(₹) ವಿವಾದ ಭುಗಿಲೆಬ್ಬಿಸಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಶುಕ್ರವಾರ ಆರೋಪ ಮಾಡಿದ್ದಾರೆ.</p>.<p>ಜಯನಗರದ ಜೈನ್ ಡೀಮ್ಡ್ ವಿಶ್ವ ವಿದ್ಯಾಲಯದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅಣ್ಣಾಮಲೈ ರೂಪಾಯಿ ಚಿಹ್ನೆಯ ಕುರಿತಂತೆ ತಮಿಳುನಾಡಿನಲ್ಲಿ ಉದ್ದೇಶ ಪೂರ್ವಕವಾಗಿಯೇ ವಿವಾದ ಸೃಷ್ಟಿಸಲಾಗುತ್ತಿದೆ ಎಂದರು.</p>.<p>ಕೇಂದ್ರ ಸರ್ಕಾರ ಅಳವಡಿಸಿಕೊಂಡಿರುವ ₹ ಚಿಹ್ನೆಯ ಬದಲಿಗೆ ತಮಿಳುನಾಡು ಸರ್ಕಾರ ಶುಕ್ರವಾರ ಮಂಡಿಸಿದ ತನ್ನ ಬಜೆಟ್ನಲ್ಲಿ ತಮಿಳಿನ ‘ರೂ’ ಪದವನ್ನು ಬಳಕೆ ಮಾಡಿದೆ.</p>.<p>ಜಾರಿ ನಿರ್ದೇಶನಾಲಯ(ಇಡಿ) ತಮಿಳುನಾಡಿನ ಟಿಎಎಸ್ಎಮ್ಎಸಿಯಲ್ಲಿ (ಸರ್ಕಾರಿ ಆಡಳಿತದ ಮದ್ಯ ಮಾರಾಟ ನಿಗಮ) ₹1000 ಕೋಟಿ ಅಬಕಾರಿ ಕಿಕ್ಬ್ಯಾಕ್ ಪತ್ತೆ ಮಾಡಿದೆ.ಇದರಿಂದ ಜನರ ಗಮನ ಬೇರೆಡೆ ಸೆಳೆಯಲು ತಮಿಳುನಾಡು ಸರ್ಕಾರ ₹ ವಿವಾದ ಎಬ್ಬಿಸಿದೆ ಎಂದರು.</p>.<p>ತಮಿಳುನಾಡು ಸರ್ಕಾರದ ಬಜೆಟ್ ಕಣ್ಣೊರೆಸುವ ತಂತ್ರವಾಗಿದೆ. ಕಳೆದ ನಾಲ್ಕು ಬಜೆಟ್ಗಳಿಗೆ ಹೋಲಿಸಿದರೆ ಈ ವರ್ಷದ ಬಜೆಟ್ನಲ್ಲಿ ಏನೇನೂ ಇಲ್ಲ. ಹೀಗಾಗಿ ಬಿಜೆಪಿಯ ನಾಲ್ವರು ಶಾಸಕರು ಸದನದಲ್ಲಿ ಸಭಾತ್ಯಾಗ ಮಾಡಿದ್ದಾರೆ ಎಂದು ಅಣ್ಣಾಮಲೈ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>