<p><strong>ನವದೆಹಲಿ:</strong> ದೇಶದಾದ್ಯಂತ 11 ನದಿಗಳ ನೀರಿನ ಪ್ರಮಾಣವು ಎಚ್ಚರಿಕೆ ಮಟ್ಟ ಮೀರಿದೆ. ಆದರೆ, ಅವು ಅಪಾಯದ ಅಥವಾ ತೀವ್ರ ಪ್ರವಾಹದ ಮಟ್ಟ ತಲುಪಿಲ್ಲ ಎಂದು ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಬುಧವಾರ ತಿಳಿಸಿದೆ.</p>.<p>ಕೇಂದ್ರ ಪ್ರವಾಹ ನಿಯಂತ್ರಣ ಕೊಠಡಿಯ ದೈನಂದಿನ ಬುಲೆಟಿನ್, ಈ ಕುರಿತು ಮಾಹಿತಿಯನ್ನು ಬಿಡುಗಡೆ ಮಾಡಿದೆ.</p>.<p class="title">ಪ್ರಸ್ತುತ ಅಸ್ಸಾಂ, ಬಿಹಾರ, ಒಡಿಶಾ, ತಮಿಳುನಾಡು ಮತ್ತು ಉತ್ತರಪ್ರದೇಶ ಸೇರಿದಂತೆ 12 ಸ್ಥಳಗಳಲ್ಲಿ ನೀರಿನ ಪ್ರಮಾಣವು ಎಚ್ಚರಿಕೆ ಮಟ್ಟ ತಲುಪಿವೆ. ಆದರೆ, ಯಾವುದೇ ಪ್ರದೇಶವು ಅಪಾಯದ ಮಟ್ಟಕ್ಕೇರಿಲ್ಲ ಎಂದು ಅದು ತಿಳಿಸಿದೆ.</p>.<p class="title"> ಆಂಧ್ರಪ್ರದೇಶ, ಜಾರ್ಖಂಡ್, ಕರ್ನಾಟಕ, ಒಡಿಶಾ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 10 ರಾಜ್ಯಗಳಲ್ಲಿ ಜಲಾಶಯ ಮತ್ತು ಬ್ಯಾರೇಜ್ಗಳ 23 ಸ್ಥಳಗಳಲ್ಲಿ ಒಳಹರಿವಿನ ಮಟ್ಟ ಹೆಚ್ಚುವ ಮುನ್ಸೂಚನೆಯನ್ನು ಸಿಡಬ್ಲ್ಯೂಸಿ ನೀಡಿದೆ.</p>.<p class="title">ಆಲಮಟ್ಟಿ, ನಾರಾಯಣಪುರ, ತುಂಗಭದ್ರಾ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಒಳ ಹರಿವಿನ ಮಟ್ಟ ಹೆಚ್ಚಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೇಶದಾದ್ಯಂತ 11 ನದಿಗಳ ನೀರಿನ ಪ್ರಮಾಣವು ಎಚ್ಚರಿಕೆ ಮಟ್ಟ ಮೀರಿದೆ. ಆದರೆ, ಅವು ಅಪಾಯದ ಅಥವಾ ತೀವ್ರ ಪ್ರವಾಹದ ಮಟ್ಟ ತಲುಪಿಲ್ಲ ಎಂದು ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಬುಧವಾರ ತಿಳಿಸಿದೆ.</p>.<p>ಕೇಂದ್ರ ಪ್ರವಾಹ ನಿಯಂತ್ರಣ ಕೊಠಡಿಯ ದೈನಂದಿನ ಬುಲೆಟಿನ್, ಈ ಕುರಿತು ಮಾಹಿತಿಯನ್ನು ಬಿಡುಗಡೆ ಮಾಡಿದೆ.</p>.<p class="title">ಪ್ರಸ್ತುತ ಅಸ್ಸಾಂ, ಬಿಹಾರ, ಒಡಿಶಾ, ತಮಿಳುನಾಡು ಮತ್ತು ಉತ್ತರಪ್ರದೇಶ ಸೇರಿದಂತೆ 12 ಸ್ಥಳಗಳಲ್ಲಿ ನೀರಿನ ಪ್ರಮಾಣವು ಎಚ್ಚರಿಕೆ ಮಟ್ಟ ತಲುಪಿವೆ. ಆದರೆ, ಯಾವುದೇ ಪ್ರದೇಶವು ಅಪಾಯದ ಮಟ್ಟಕ್ಕೇರಿಲ್ಲ ಎಂದು ಅದು ತಿಳಿಸಿದೆ.</p>.<p class="title"> ಆಂಧ್ರಪ್ರದೇಶ, ಜಾರ್ಖಂಡ್, ಕರ್ನಾಟಕ, ಒಡಿಶಾ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 10 ರಾಜ್ಯಗಳಲ್ಲಿ ಜಲಾಶಯ ಮತ್ತು ಬ್ಯಾರೇಜ್ಗಳ 23 ಸ್ಥಳಗಳಲ್ಲಿ ಒಳಹರಿವಿನ ಮಟ್ಟ ಹೆಚ್ಚುವ ಮುನ್ಸೂಚನೆಯನ್ನು ಸಿಡಬ್ಲ್ಯೂಸಿ ನೀಡಿದೆ.</p>.<p class="title">ಆಲಮಟ್ಟಿ, ನಾರಾಯಣಪುರ, ತುಂಗಭದ್ರಾ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಒಳ ಹರಿವಿನ ಮಟ್ಟ ಹೆಚ್ಚಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>