<p class="title"><strong>ಕೋಲ್ಕತ್ತ</strong>: ‘ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡುವುದರ ಕುರಿತು ಟಾಟಾ ಸಮೂಹ ಜೊತೆಗೆ ಚರ್ಚೆ ನಡೆದಿದೆ’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪಾರ್ಥ ಚಟರ್ಜಿ ಹೇಳಿದ್ದಾರೆ.</p>.<p class="title">ರಾಜ್ಯದ ಸಿಂಗೂರ್ನಲ್ಲಿ ಟಾಟಾ ಸಮೂಹದ ಸಣ್ಣಗಾತ್ರದ ಕಾರುಗಳ ಉತ್ಪಾದನೆ ಘಟಕ ಸ್ಥಾಪನೆ ಕುರಿತಂತೆ ಭೂ ಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದ 13 ವರ್ಷದ ತರುವಾಯ ಟಾಟಾ ಜೊತೆಗೆ ಮಾತುಕತೆ ನಡೆಯುತ್ತಿದೆ.</p>.<p>ಉದ್ಯೋಗಾವಕಾಶ ಸೃಷ್ಟಿಯೇ ಟಿಎಂಸಿ ಸರ್ಕಾರದ ಮೊದಲ ಆದ್ಯತೆ ಎಂದು ಪ್ರತಿಪಾದಿಸಿರುವ ಸಚಿವ ಚಟರ್ಜಿ, ಉದ್ಯೋಗಾವಕಾಶಗಳ ಸೃಷ್ಟಿ ಸಾಮರ್ಥ್ಯ ಆಧರಿಸಿ ಕಂಪನಿಗಳಿಗೆ ಉತ್ತೇಜನ ನೀಡಲಾಗುತ್ತದೆ ಎಂದು ಹೇಳಿದರು.</p>.<p>ಯಾವುದೇ ಪ್ರಮುಖ ಉದ್ಯಮ ಸಂಸ್ಥೆಗಳು ಆದಷ್ಟು ಶೀಘ್ರ ಎರಡು ದೊಡ್ಡ ಪ್ರಮಾಣದ ಉತ್ಪಾದನಾ ಘಟಕಗಳನ್ನು ರಾಜ್ಯದಲ್ಲಿ ಸ್ಥಾಪಿಸಬೇಕು ಎಂದು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಬಯಸುತ್ತದೆ ಎಂದು ತಿಳಿಸಿದರು.</p>.<p>‘ಟಾಟಾ ಸಮೂಹದ ಜೊತೆಗೆ ನಮಗೆ ಯಾವುದೇ ವೈರತ್ಯವಿಲ್ಲ. ಅವರ ಜೊತೆಗೆ ಜಗಳವೂ ಆಗಿಲ್ಲ. ಟಾಟಾ ಸಮೂಹ ದೇಶದ ಅತಿದೊಡ್ಡ ಗೌರವಾನ್ವಿತ ಉದ್ಯಮ ಸಂಸ್ಥೆಯಾಗಿದೆ. ಸಿಂಗೂರ್ನ ವೈಫಲ್ಯಕ್ಕಾಗಿ ನಾವು ಟಾಟಾ ಸಮೂಹವನ್ನು ದೂಷಿಸಲಾಗದು’ ಎಂದು ಅವರು ಪ್ರತಿಪಾದಿಸಿದರು.</p>.<p>‘ಸಮಸ್ಯೆ ಇದ್ದುದು ಆಗಿನ ಎಡಪಂಥದ ಸರ್ಕಾರ ಮತ್ತು ಒತ್ತಾಯದಿಂದ ಭೂಸ್ವಾಧೀನ ಪಡಿಸಿಕೊಳ್ಳುವ ಅದರ ನೀತಿಯಲ್ಲಿ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಟಾಟಾ ಸಮೂಹಕ್ಕೆ ಎಂದಿಗೂ ಮುಕ್ತ ಸ್ವಾತಂತ್ರ್ಯವಿದೆ’ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪಾರ್ಥ ಚಟರ್ಜಿ ಅವರು ಹೇಳಿದರು.</p>.<p>ಟಾಟಾ ಸಮೂಹವು ತನ್ನ ಕಚೇರಿಗಳಿಗಾಗಿ ಟಾಟಾ ಸೆಂಟರ್ ಅನ್ನು ರಾಜ್ಯದಲ್ಲಿ ಸ್ಥಾಪಿಸುವ ಆಸಕ್ತಿ ಹೊಂದಿದೆ. ಈಗಾಗಲೇ ಟಿಸಿಎಸ್, ಟಾಟಾ ಮೆಟಾಲಿಕ್ ಇವೆ. ಉಳಿದಂತೆ, ಇತರೆ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿಯನ್ನು ತೋರುವುದಾದರೆ ಸ್ವಾಗತ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಕೋಲ್ಕತ್ತ</strong>: ‘ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡುವುದರ ಕುರಿತು ಟಾಟಾ ಸಮೂಹ ಜೊತೆಗೆ ಚರ್ಚೆ ನಡೆದಿದೆ’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪಾರ್ಥ ಚಟರ್ಜಿ ಹೇಳಿದ್ದಾರೆ.</p>.<p class="title">ರಾಜ್ಯದ ಸಿಂಗೂರ್ನಲ್ಲಿ ಟಾಟಾ ಸಮೂಹದ ಸಣ್ಣಗಾತ್ರದ ಕಾರುಗಳ ಉತ್ಪಾದನೆ ಘಟಕ ಸ್ಥಾಪನೆ ಕುರಿತಂತೆ ಭೂ ಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದ 13 ವರ್ಷದ ತರುವಾಯ ಟಾಟಾ ಜೊತೆಗೆ ಮಾತುಕತೆ ನಡೆಯುತ್ತಿದೆ.</p>.<p>ಉದ್ಯೋಗಾವಕಾಶ ಸೃಷ್ಟಿಯೇ ಟಿಎಂಸಿ ಸರ್ಕಾರದ ಮೊದಲ ಆದ್ಯತೆ ಎಂದು ಪ್ರತಿಪಾದಿಸಿರುವ ಸಚಿವ ಚಟರ್ಜಿ, ಉದ್ಯೋಗಾವಕಾಶಗಳ ಸೃಷ್ಟಿ ಸಾಮರ್ಥ್ಯ ಆಧರಿಸಿ ಕಂಪನಿಗಳಿಗೆ ಉತ್ತೇಜನ ನೀಡಲಾಗುತ್ತದೆ ಎಂದು ಹೇಳಿದರು.</p>.<p>ಯಾವುದೇ ಪ್ರಮುಖ ಉದ್ಯಮ ಸಂಸ್ಥೆಗಳು ಆದಷ್ಟು ಶೀಘ್ರ ಎರಡು ದೊಡ್ಡ ಪ್ರಮಾಣದ ಉತ್ಪಾದನಾ ಘಟಕಗಳನ್ನು ರಾಜ್ಯದಲ್ಲಿ ಸ್ಥಾಪಿಸಬೇಕು ಎಂದು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಬಯಸುತ್ತದೆ ಎಂದು ತಿಳಿಸಿದರು.</p>.<p>‘ಟಾಟಾ ಸಮೂಹದ ಜೊತೆಗೆ ನಮಗೆ ಯಾವುದೇ ವೈರತ್ಯವಿಲ್ಲ. ಅವರ ಜೊತೆಗೆ ಜಗಳವೂ ಆಗಿಲ್ಲ. ಟಾಟಾ ಸಮೂಹ ದೇಶದ ಅತಿದೊಡ್ಡ ಗೌರವಾನ್ವಿತ ಉದ್ಯಮ ಸಂಸ್ಥೆಯಾಗಿದೆ. ಸಿಂಗೂರ್ನ ವೈಫಲ್ಯಕ್ಕಾಗಿ ನಾವು ಟಾಟಾ ಸಮೂಹವನ್ನು ದೂಷಿಸಲಾಗದು’ ಎಂದು ಅವರು ಪ್ರತಿಪಾದಿಸಿದರು.</p>.<p>‘ಸಮಸ್ಯೆ ಇದ್ದುದು ಆಗಿನ ಎಡಪಂಥದ ಸರ್ಕಾರ ಮತ್ತು ಒತ್ತಾಯದಿಂದ ಭೂಸ್ವಾಧೀನ ಪಡಿಸಿಕೊಳ್ಳುವ ಅದರ ನೀತಿಯಲ್ಲಿ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಟಾಟಾ ಸಮೂಹಕ್ಕೆ ಎಂದಿಗೂ ಮುಕ್ತ ಸ್ವಾತಂತ್ರ್ಯವಿದೆ’ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪಾರ್ಥ ಚಟರ್ಜಿ ಅವರು ಹೇಳಿದರು.</p>.<p>ಟಾಟಾ ಸಮೂಹವು ತನ್ನ ಕಚೇರಿಗಳಿಗಾಗಿ ಟಾಟಾ ಸೆಂಟರ್ ಅನ್ನು ರಾಜ್ಯದಲ್ಲಿ ಸ್ಥಾಪಿಸುವ ಆಸಕ್ತಿ ಹೊಂದಿದೆ. ಈಗಾಗಲೇ ಟಿಸಿಎಸ್, ಟಾಟಾ ಮೆಟಾಲಿಕ್ ಇವೆ. ಉಳಿದಂತೆ, ಇತರೆ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿಯನ್ನು ತೋರುವುದಾದರೆ ಸ್ವಾಗತ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>