<p><strong>ನವದೆಹಲಿ</strong>: 1984ರ ಸಿಖ್ ವಿರೋಧಿ ಗಲಭೆ ವೇಳೆ ನಡೆದಿದ್ದ ಜೋಡಿ ಕೊಲೆ ಕೃತ್ಯದ ಸಂಬಂಧ ಮಾಜಿ ಸಂಸದ, ಕಾಂಗ್ರೆಸ್ನ ಸಜ್ಜನ್ ಕುಮಾರ್ ಅವರ ವಿರುದ್ಧದ ಪ್ರಕರಣ ಸಂಬಂಧ ತೀರ್ಪು ಹೊರಡಿಸುವುದನ್ನು ದೆಹಲಿ ಹೈಕೋರ್ಟ್ ಮುಂದೂಡಿದೆ.</p>.<p>ವಿಶೇಷ ನ್ಯಾಯಾಧೀಶರಾದ ಕಾವೇರಿ ಭವೇಜಾ ಅವರು, ಪೂರ್ವನಿಗದಿಯಂತೆ ಮಂಗಳವಾರ ತೀರ್ಪು ನೀಡಬೇಕಾಗಿತ್ತು. ಇನ್ನಷ್ಟು ವಾದಮಂಡನೆ ಅಗತ್ಯವಿದೆ ಎಂಬ ವಕೀಲರ ಕೋರಿಕೆಯ ಕಾರಣದಿಂದಾಗಿ ಆದೇಶ ಹೊರಡಿಸುವುದನ್ನು ಜನವರಿ 31ಕ್ಕೆ ಮುಂದೂಡಿದರು.</p>.<p>ಸಿಖ್ ವಿರೋಧಿ ಗಲಭೆ ಅವಧಿಯಲ್ಲಿ ಸರಸ್ವತಿ ವಿಹಾರ್ ಬಡಾವಣೆಯಲ್ಲಿ ನಡೆದಿದ್ದ ಇಬ್ಬರ ಕೊಲೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಸಜ್ಜನ್ ಕುಮಾರ್ ಅವರು ಸದ್ಯ ತಿಹಾರ್ ಜೈಲಿನಲ್ಲಿ ಇದ್ದು, ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು.</p>.<p>ನವೆಂಬರ್ 1, 1984ರಲ್ಲಿ ನಡೆದಿದ್ದ ಘಟನೆಯಲ್ಲಿ ಜಸ್ವಂತ್ ಸಿಂಗ್ ಮತ್ತು ಅವರ ಪುತ್ರ ತರುಣ್ದೀಪ್ ಸಿಂಗ್ ಮೃತಪಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: 1984ರ ಸಿಖ್ ವಿರೋಧಿ ಗಲಭೆ ವೇಳೆ ನಡೆದಿದ್ದ ಜೋಡಿ ಕೊಲೆ ಕೃತ್ಯದ ಸಂಬಂಧ ಮಾಜಿ ಸಂಸದ, ಕಾಂಗ್ರೆಸ್ನ ಸಜ್ಜನ್ ಕುಮಾರ್ ಅವರ ವಿರುದ್ಧದ ಪ್ರಕರಣ ಸಂಬಂಧ ತೀರ್ಪು ಹೊರಡಿಸುವುದನ್ನು ದೆಹಲಿ ಹೈಕೋರ್ಟ್ ಮುಂದೂಡಿದೆ.</p>.<p>ವಿಶೇಷ ನ್ಯಾಯಾಧೀಶರಾದ ಕಾವೇರಿ ಭವೇಜಾ ಅವರು, ಪೂರ್ವನಿಗದಿಯಂತೆ ಮಂಗಳವಾರ ತೀರ್ಪು ನೀಡಬೇಕಾಗಿತ್ತು. ಇನ್ನಷ್ಟು ವಾದಮಂಡನೆ ಅಗತ್ಯವಿದೆ ಎಂಬ ವಕೀಲರ ಕೋರಿಕೆಯ ಕಾರಣದಿಂದಾಗಿ ಆದೇಶ ಹೊರಡಿಸುವುದನ್ನು ಜನವರಿ 31ಕ್ಕೆ ಮುಂದೂಡಿದರು.</p>.<p>ಸಿಖ್ ವಿರೋಧಿ ಗಲಭೆ ಅವಧಿಯಲ್ಲಿ ಸರಸ್ವತಿ ವಿಹಾರ್ ಬಡಾವಣೆಯಲ್ಲಿ ನಡೆದಿದ್ದ ಇಬ್ಬರ ಕೊಲೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಸಜ್ಜನ್ ಕುಮಾರ್ ಅವರು ಸದ್ಯ ತಿಹಾರ್ ಜೈಲಿನಲ್ಲಿ ಇದ್ದು, ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು.</p>.<p>ನವೆಂಬರ್ 1, 1984ರಲ್ಲಿ ನಡೆದಿದ್ದ ಘಟನೆಯಲ್ಲಿ ಜಸ್ವಂತ್ ಸಿಂಗ್ ಮತ್ತು ಅವರ ಪುತ್ರ ತರುಣ್ದೀಪ್ ಸಿಂಗ್ ಮೃತಪಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>