ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರಾವತಿ ಬಳಿ ಹಳಿತಪ್ಪಿದ ಸರಕು ಸಾಗಣೆ ರೈಲಿನ 20 ಬೋಗಿ: ರೈಲು ಸೇವೆಯಲ್ಲಿ ವ್ಯತ್ಯಯ

Last Updated 24 ಅಕ್ಟೋಬರ್ 2022, 5:46 IST
ಅಕ್ಷರ ಗಾತ್ರ

ಅಮರಾವತಿ: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಸರಕು ಸಾಗಣೆ ರೈಲಿನ ಇಪ್ಪತ್ತು ಕಲ್ಲಿದ್ದಲು ಬೋಗಿಗಳು ಹಳಿತಪ್ಪಿವೆ. ಹೀಗಾಗಿ, ಈ ಮಾರ್ಗದ ರೈಲು ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದೆ.

ಅನೇಕ ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಲಾಗಿದ್ದು, ಕೆಲ ರೈಲುಗಳನ್ನು ಅಲ್ಪಾವಧಿಗೆ ತಡೆಹಿಡಿಯಲಾಗಿದೆ. ಇನ್ನೂ ಕೆಲವನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.

ನಾಗ್ಪುರ ವಿಭಾಗದ ವಾರ್ಧಾ-ಬದ್ನೇರಾ ವಿಭಾಗದ ಮಲ್ಖೇಡ್ ಮತ್ತು ತಿಮಟ್ಲಾ ನಿಲ್ದಾಣಗಳ ನಡುವೆ ಭಾನುವಾರ ರಾತ್ರಿ 11.20ಕ್ಕೆ ರೈಲಿನ ಬೋಗಿಗಳು ಹಳಿತಪ್ಪಿವೆ ಎಂದು ಕೇಂದ್ರ ರೈಲ್ವೆ ಪ್ರಕಟಣೆ ತಿಳಿಸಿದೆ.

11122 ವಾರ್ಧಾ-ಭೂಸಾವಲ್, 12140 ನಾಗ್ಪುರ-ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, 12119 ಅಮರಾವತಿ-ನಾಗ್ಪುರ, 11040 ಗೊಂಡಿಯಾ-ಕೊಲ್ಹಾಪುರ, 01372 ವಾರ್ಧಾ-ಅಮರ-ಅಮರಾವತಿ, 17642 ನಾರ್ಖೇರ್-ಕಾಚಿಗುಡ, 11121 ಭೂಸಾವಲ್-ವಾರ್ಧಾ, 12106 ಗೊಂಡಿಯಾ-ಜಿಎಸ್‌ಎಂಟಿ, 12136 ನಾಗ್ಪುರ-ಪುಣೆ, 12120 ಅಜ್ನಿ-ಅಮರಾವತಿ, 12140 ನಾಗ್ಪುರ-ಜಿಎಸ್‌ಎಂಟಿ ಮತ್ತು 01374 ನಾಗ್ಪುರ-ವಾರ್ಧಾ ರೈಲುಗಳ ಸಂಚಾರದಲ್ಲಿ ಅಡಚಣೆ ಉಂಟಾಗಿದೆ.

ಚಂದೂರ್ ಬಜಾರ್-ನಾರ್ಖೇಡ್, ನಾಗ್ಪುರ-ನಾರ್ಖೇಡ್-ಚಂದೂರ್ ಬಜಾರ್-ಬದ್ನೇರಾ, ವಾಡಿ-ದೌಂಡ್-ಮನ್ಮಾಡ್-ಜಲ್ಗಾಂವ್, ಭೂಸಾವಲ್-ಖಾಂಡ್ವಾ-ಇಟಾರ್ಸಿ-ನಾಗ್ಪುರ, ಡಿ ಅಕೋಲಾ-ಸಿಕಂದರಾಬಾದ್ ಮತ್ತು ಇತರ ಮಾರ್ಗಗಳ ರೈಲುಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ನಾಗ್ಪುರ ಮತ್ತು ಇತರ ಸ್ಥಳಗಳಲ್ಲಿ ಅನೇಕ ರೈಲುಗಳನ್ನು ಅಲ್ಪಾವಧಿಗೆ ತಡೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT