ರಾಂಚಿ: ಜಾರ್ಖಂಡ್ನ ಲಾತೆಹಾರ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 3 ಮಂದಿ ನಕ್ಸಲೀಯರನ್ನು ಭದ್ರತಾ ಪಡೆಗಳು ಗುಂಡಿಟ್ಟು ಕೊಂದಿವೆ.
ಹತ್ಯೆಗೀಡಾದ ನಕ್ಸಲೀಯರನ್ನು ಸಿಪಿಐ(ಮಾವೋವಾದಿ)ಯಿಂದ ಪ್ರತ್ಯೇಕವಾಗಿರುವ ತೃತೀಯ ಪ್ರಸ್ತುತಿ ಸಮಿತಿಯ ಸದಸ್ಯರು ಎಂದು ಪೊಲೀಸರು ಹೇಳಿದ್ದಾರೆ.
ಶನಿವಾರ ಬೆಳಿಗ್ಗೆ ಮಾವೋವಾದಿಗಳು ಮತ್ತು ಭದ್ರತಾ ಪಡೆಗಳ ಮಧ್ಯೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಮೂವರು ನಕ್ಸಲರು ಮೃತಪಟ್ಟರು. ಕೆಲವು ನಕ್ಸಲರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಐಜಿಪಿ ಹೇಳಿದ್ದಾರೆ.