ಟಿಂಟೆಡ್ ಗ್ಲಾಸ್ ಹೊಂದಿದ್ದ ಈ ಕಾರನ್ನು ಸಚಿವರ ಪುತ್ರ ಅರಿಜಿತ್ ಚೌಬೆ ಚಾಲನೆ ಮಾಡುತ್ತಿದ್ದರು. ಸಚಿವರ ಕುಟುಂಬದವರೂ ಕಾರಿನಲ್ಲಿದ್ದರು. ಪೊಲೀಸರ ಸೂಚನೆ ಮೇರೆಗೆ ಅರಿಜಿತ್ ಅವರು ಕಾರನ್ನು ನಿಲ್ಲಿಸಿದ್ದರು. ಆದರೆ, ದಾಖಲೆಪತ್ರಗಳನ್ನು ತಪಾಸಣೆ ನಡೆಸದೇ ಕಾರನ್ನು ಕಳುಹಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಬ್ ಇನ್ಸ್ಪೆಕ್ಟರ್ ದೇವಪಾಲ್ ಪಾಸ್ವಾನ್, ಕಾನ್ಸ್ಟೇಬಲ್ಗಳಾದ ದಿಲೀಪ್ ಚಂದ್ರ ಸಿಂಗ್ ಮತ್ತು ಪಪ್ಪು ಕುಮಾರ ಅಮಾನತುಗೊಂಡವರು. ಈ ಮೂವರು ಕರ್ತವ್ಯಲೋಪ ಎಸಗಿದ್ದಾರೆ ಎಂದು ಪಟ್ನಾ ಪೊಲೀಸ್ ಆಯುಕ್ತ ಆನಂದ ಕಿಶೋರ್ ನಿರ್ದೇಶನದ ಮೇರೆಗೆ ಪೊಲೀಸ್ ವರಿಷ್ಠಾಧಿಕಾರಿ (ಸಂಚಾರ) ಡಿ.ಅಮರ್ಕೇಶ್ ಅಮಾನತು ಮಾಡಿದ್ದಾರೆ.