<p><strong>ಅಹಮದಾಬಾದ್:</strong> ಏಷಿಯಾ ತಳಿ ಸಿಂಹಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಗುಜರಾತ್, ಈಗ ಗೋವುಗಳಿಂದಲೂ ಪ್ರವಾಸಿಗರನ್ನು ಸೆಳೆಯಲು<br /> ಸಜ್ಜಾಗಿದೆ. </p>.<p>ಗುಜರಾತ್ ರಾಜ್ಯದ ಗೋವು ಸೇವಾ ಆಯೋಗ ಗೋ ಪ್ರವಾಸೋದ್ಯಮ ಆರಂಭಿಸಿದೆ. ಆಕಳುಗಳನ್ನು ಸಾಕುವುದು ಮತ್ತು ಗೋಮೂತ್ರ, ಸಗಣಿ ಬಳಸಿಕೊಂಡು ಉತ್ಪನ್ನಗಳನ್ನು ತಯಾರಿಸುವುದು ಹೇಗೆ ಎನ್ನುವುದರಲ್ಲಿ ಆಸಕ್ತಿ ಹೊಂದಿರುವ ಜನರಿಗೆ ಈ ಕುರಿತು ಮಾಹಿತಿ ಒದಗಿಸಲಾಗುತ್ತದೆ. ಪ್ರವಾಸಿಗರನ್ನು ಎರಡು ದಿನಗಳ ಅವಧಿಯಲ್ಲಿ ಕೆಲವು ಅತ್ಯುತ್ತಮ ಗೋಶಾಲೆಗಳಿಗೆ ಹಾಗೂ ಗೋಮಾಳಗಳಿಗೆ ಕರೆದೊಯ್ಯಲಾಗುತ್ತದೆ ಎಂದು ಆಯೋಗದ ಅಧ್ಯಕ್ಷ ವಲ್ಲಭ್ ಕಠೇರಿಯಾ ತಿಳಿಸಿದ್ದಾರೆ.</p>.<p>‘ಗೋವುಗಳಿಂದ ಇರುವ ಆರ್ಥಿಕ ಲಾಭವನ್ನು ಜನರಿಗೆ ತಿಳಿಸಲು ಈ ಪ್ರವಾಸೋದ್ಯಮ ರೂಪಿಸಲಾಗಿದೆ. ಗೋವುಗಳ ಧಾರ್ಮಿಕ ಹಾಗೂ ಆರ್ಥಿಕ ಆಯಾಮವನ್ನು ಒಟ್ಟಾಗಿ ತಿಳಿಸುವುದು ನಮ್ಮ ಉದ್ದೇಶ’ ಎಂದು ಅವರು ಹೇಳಿದ್ದಾರೆ.</p>.<p>‘ಯೋಜನೆ ರೂಪಿಸಿದ ಅಲ್ಪಾವಧಿಯಲ್ಲಿಯೇ ರಾಜ್ಯದಾದ್ಯಂತ ಇಂತಹ ಹಲವು ಪ್ರವಾಸಗಳನ್ನು ಆಯೋಜಿಸಿದ್ದೇವೆ. ಆರ್ಥಿಕ ಲಾಭದ ಕುರಿತು ತಿಳಿದ ಬಳಿಕ ಹಲವು ಪ್ರವಾಸಿಗರು ಆಕಳುಗಳನ್ನು ಸಾಕಲು ಆರಂಭಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಹಮದಾಬಾದ್:</strong> ಏಷಿಯಾ ತಳಿ ಸಿಂಹಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಗುಜರಾತ್, ಈಗ ಗೋವುಗಳಿಂದಲೂ ಪ್ರವಾಸಿಗರನ್ನು ಸೆಳೆಯಲು<br /> ಸಜ್ಜಾಗಿದೆ. </p>.<p>ಗುಜರಾತ್ ರಾಜ್ಯದ ಗೋವು ಸೇವಾ ಆಯೋಗ ಗೋ ಪ್ರವಾಸೋದ್ಯಮ ಆರಂಭಿಸಿದೆ. ಆಕಳುಗಳನ್ನು ಸಾಕುವುದು ಮತ್ತು ಗೋಮೂತ್ರ, ಸಗಣಿ ಬಳಸಿಕೊಂಡು ಉತ್ಪನ್ನಗಳನ್ನು ತಯಾರಿಸುವುದು ಹೇಗೆ ಎನ್ನುವುದರಲ್ಲಿ ಆಸಕ್ತಿ ಹೊಂದಿರುವ ಜನರಿಗೆ ಈ ಕುರಿತು ಮಾಹಿತಿ ಒದಗಿಸಲಾಗುತ್ತದೆ. ಪ್ರವಾಸಿಗರನ್ನು ಎರಡು ದಿನಗಳ ಅವಧಿಯಲ್ಲಿ ಕೆಲವು ಅತ್ಯುತ್ತಮ ಗೋಶಾಲೆಗಳಿಗೆ ಹಾಗೂ ಗೋಮಾಳಗಳಿಗೆ ಕರೆದೊಯ್ಯಲಾಗುತ್ತದೆ ಎಂದು ಆಯೋಗದ ಅಧ್ಯಕ್ಷ ವಲ್ಲಭ್ ಕಠೇರಿಯಾ ತಿಳಿಸಿದ್ದಾರೆ.</p>.<p>‘ಗೋವುಗಳಿಂದ ಇರುವ ಆರ್ಥಿಕ ಲಾಭವನ್ನು ಜನರಿಗೆ ತಿಳಿಸಲು ಈ ಪ್ರವಾಸೋದ್ಯಮ ರೂಪಿಸಲಾಗಿದೆ. ಗೋವುಗಳ ಧಾರ್ಮಿಕ ಹಾಗೂ ಆರ್ಥಿಕ ಆಯಾಮವನ್ನು ಒಟ್ಟಾಗಿ ತಿಳಿಸುವುದು ನಮ್ಮ ಉದ್ದೇಶ’ ಎಂದು ಅವರು ಹೇಳಿದ್ದಾರೆ.</p>.<p>‘ಯೋಜನೆ ರೂಪಿಸಿದ ಅಲ್ಪಾವಧಿಯಲ್ಲಿಯೇ ರಾಜ್ಯದಾದ್ಯಂತ ಇಂತಹ ಹಲವು ಪ್ರವಾಸಗಳನ್ನು ಆಯೋಜಿಸಿದ್ದೇವೆ. ಆರ್ಥಿಕ ಲಾಭದ ಕುರಿತು ತಿಳಿದ ಬಳಿಕ ಹಲವು ಪ್ರವಾಸಿಗರು ಆಕಳುಗಳನ್ನು ಸಾಕಲು ಆರಂಭಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>