ಕುಟುಂಬ ಸಂಬಂಧಿತ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ಪೋಚಂಪಾಡು ಬಳಿ ಸುಮಾರು 25 ಮಂದಿಯ ಗುಂಪು ಸೇರಿತ್ತು. ಇವರೆಲ್ಲರೂ ಸಂಬಂಧಿಕರು. ಇವರಲ್ಲಿ ಏಳು ಮಂದಿ ಸ್ನಾನಕ್ಕಾಗಿ ನದಿಗೆ ಇಳಿದಿದ್ದರು. ಆಳ ನೀರಿನ ಕಡೆಗೆ ಹೋದಾಗ ನೀರಿನಲ್ಲಿ ಮುಳುಗಿದ್ದಾರೆ. ಇವರಲ್ಲಿ ಯಾರಿಗೂ ಈಜು ಗೊತ್ತಿರಲಿಲ್ಲ. ಇದರಲ್ಲಿ ಒಬ್ಬರನ್ನು ರಕ್ಷಿಸಲಾಗಿದೆ. ಉಳಿದವರು ಜಲಸಮಾಧಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.