ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ₹3 ಸಾವಿರ ಹಣಕ್ಕಾಗಿ ಯುವಕನನ್ನು ಚಾಕುವಿನಿಂದ ಇರಿದು ಕೊಂದ ವ್ಯಕ್ತಿ!

Published 2 ಆಗಸ್ಟ್ 2023, 13:56 IST
Last Updated 2 ಆಗಸ್ಟ್ 2023, 13:56 IST
ಅಕ್ಷರ ಗಾತ್ರ

ನವದೆಹಲಿ: ₹3000 ಹಣಕ್ಕಾಗಿ ಇಪ್ಪತ್ತೊಂದು ವರ್ಷದ ಯುವಕನನ್ನು ಹಲವು ಬಾರಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ದೆಹಲಿಯ ತಿಗ್ರಿ ಎಂಬಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮೃತನನ್ನು ಸಂಗಮ್‌ ವಿಹಾರದ ನಿವಾಸಿ ಯೂಸುಫ್ ಅಲಿ(21) ಎಂದು ಗುರುತಿಸಲಾಗಿದೆ.

ಅಲಿಯನ್ನು ಚಾಕುವಿನಿಂದ ಇರಿಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅಂಗಡಿಯೊಂದರ ಬಳಿ ಆರೋಪಿ ಶಾರುಖ್‌, ಸಂತ್ರಸ್ತನನ್ನು ಹಲವು ಬಾರಿ ಇರಿಯೂತ್ತಿದ್ದರೂ, ಆತನ ಸಹಾಯಕ್ಕೆ ಯಾರು ಧಾವಿಸಲಿಲ್ಲ. ನಂತರ ಆತನ ರಕ್ಷಣೆಗಾಗಿ ಬಂದ ಕೆಲವರು ಆರೋಪಿಯನ್ನು ಥಳಿಸುತ್ತಿರುವ ದೃಶ್ಯಗಳು ವಿಡಿಯೊದಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಲಿ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಷ್ಟೊರಳಗಾಗಿ ಆತ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ

ಮಗನ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಸಾಹಿದ್, ‘ಶಾರುಖ್‌ ಎಂಬುವವರಿಂದ 3000 ರೂಪಾಯಿ ಹಣವನ್ನು ಸಾಲವಾಗಿ ನನ್ನ ಮಗ ಪಡೆದುಕೊಂಡಿದ್ದ. ಈ ವಿಚಾರವಾಗಿ ಅವರ ಮಧ್ಯೆ ಜಗಳವಾಗಿತ್ತು’ ಎಂದು ಹೇಳಿದ್ದಾರೆ.

ಆರೋಪಿಯೂ ಗಾಯಗೊಂಡಿರುವ ಕಾರಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT