ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮದ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡಲು ದೆಹಲಿ ಸರ್ಕಾರದ 2021-22ರ ಅಬಕಾರಿ ನೀತಿಯು ಕಾರ್ಟೆಲೈಸೇಶನ್ಗೆ ಅವಕಾಶ ಮಾಡಿಕೊಟ್ಟಿತು. ಲಂಚ ನೀಡಿದ ಕೆಲವು ಡೀಲರ್ಗಳಿಗೆ ಸಹಾಯ ಮಾಡಲಾಗಿದೆ. ಎಂದು ಇ.ಡಿ ಮತ್ತು ಸಿಬಿಥ ಆರೋಪಿಸಿವೆ. ಇದನ್ನು ಎಎಪಿ ಬಲವಾಗಿ ನಿರಾಕರಿಸಿದೆ.
ಈ ಸಂಬಂಧ ಬಂಧನಕ್ಕೀಡಾಗಿರುವ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಜೈಲಿನಲ್ಲಿದ್ದಾರೆ.
ಹಗರಣದ ಆರೋಪ ಬರುತ್ತಿದ್ದಂತೆ ಅಬಕಾರಿ ನೀತಿಯನ್ನು ಹಿಂಪಡೆಲಾಗಿತ್ತು. ಬಳಿಕ, ದೆಹಲಿ ಲೆಫ್ಟಿನೆಂಟ್ ಗವರ್ನರ್ ಪ್ರಕರಣದ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು, ನಂತರ ಇ.ಡಿ ಪಿಎಂಎಲ್ಎ ಅಡಿ ಪ್ರಕರಣವನ್ನು ದಾಖಲಿಸಿಕೊಂಡಿತ್ತು.