ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1993ರ ಸರಣಿ ಬಾಂಬ್‌ ಸ್ಫೋಟ ಪ್ರಕರಣ: ಅಬ್ದುಲ್‌ ಕರೀಮ್‌ ತುಂಡಾ ದೋಷಮುಕ್ತ

Published 29 ಫೆಬ್ರುವರಿ 2024, 11:36 IST
Last Updated 29 ಫೆಬ್ರುವರಿ 2024, 11:36 IST
ಅಕ್ಷರ ಗಾತ್ರ

ಜೈಪುರ: 1993ರಲ್ಲಿ ದೇಶದ ಹಲವಡೆ ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಅಬ್ದುಲ್‌ ಕರೀಮ್‌ ತುಂಡಾನನ್ನು ರಾಜಸ್ತಾನದ ಅಜ್ಮೇರ್‌ನ ವಿಶೇಷ ನ್ಯಾಯಾಲಯವು ದೋಷಮುಕ್ತಗೊಳಿಸಿದೆ.

ಆರೋಪವನ್ನು ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಧಾರಗಳು ಇಲ್ಲದ ಕಾರಣ ತುಂಡಾನನ್ನು ನ್ಯಾಯಾಲಯವು ದೋಷಮುಕ್ತಗೊಳಿಸಿದೆ. 

ಬಾಬ್ರಿ ಮಸೀದಿ ಧ್ವಂಸಗೊಂಡ ಒಂದು ವರ್ಷ ತುಂಬಿದ ನಂತರ 1993 ಡಿಸೆಂಬರ್‌ 5 ಮತ್ತು 6ರಂದು ಲಖನೌ, ಕಾನ್‌ಪುರ, ಹೈದರಾಬಾದ್‌, ಸೂರತ್‌ ಮತ್ತು ಮುಂಬೈ ನಗರಗಳಲ್ಲಿ ಸರಣಿ ಬಾಂಬ್‌ ಸ್ಫೋಟ ನಡೆಸಲಾಗಿತ್ತು.

ಈ ಪ್ರಕರಣದಲ್ಲಿ ಭೂಗತ ದೊರೆ ದಾವೂದ್‌ ಇಬ್ರಾಹಿಂ ಆಪ್ತನಾಗಿರುವ ಅಬ್ದುಲ್‌ ಕರೀಮ್‌ ತುಂಡಾ, ಇರ್ಫಾನ್‌ ಅಲಿಯಾಸ್‌ ಪಪ್ಪು ಮತ್ತು ಹಮಿದುದ್ಧಿನ್‌ ಆರೋಪಿಗಳೆಂದು ಪ‌ರಿಗಣಿಸಿ ನ್ಯಾಯಾಲಯ ವಿಚಾರಣೆ ಆರಂಭಿಸಿತ್ತು.

ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ತುಂಡಾ ದೋಷಮುಕ್ತನೆಂದು ತೀರ್ಪು ನೀಡಿದ್ದು, ಇನ್ನಿಬ್ಬರು ಆರೋಪಿಗಳಾದ ಇರ್ಫಾನ್‌ ಮತ್ತು ಹಮಿದುದ್ಧಿನ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT