ಘಟನೆ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವರಾಹುಲ್ ಸಿಂಗ್ ಲೋಧಿ ಈ ಅಪಘಾತಕ್ಕೂ ನನ್ನಕಾರಿಗೂ ಯಾವುದೇ ಸಂಬಂಧ ಇಲ್ಲ, ನಾನು ಸೋಮವಾರ ಇಡೀ ದಿನ ಫುತೇರ್ನಲ್ಲಿ ಇದ್ದೆ ಎಂದು ಹೇಳಿದ್ದಾರೆ. ನನ್ನಕಾರು ಬೈಕಿಗೆ ಗುದ್ದಿಲ್ಲ, ಎರಡು ಆಟೊಗಳು ಮತ್ತು ಬೈಕ್ ನಡುವೆ ಈ ಅಪಘಾತ ಸಂಭವಿಸಿದೆ ಎಂದು ನಮ್ಮ ಕಾರು ಚಾಲಕ ತಿಳಿಸಿದ್ದಾನೆ ಎಂದು ರಾಹುಲ್ ಸಿಂಗ್ ಮಾಹಿತಿ ನೀಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರು ನಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯವರಾಗಿದ್ದು ಅವರ ಕುಟುಂಬ ವರ್ಗದವರನ್ನು ಶೀಘ್ರದಲ್ಲೇ ಭೇಟಿ ಮಾಡಿ ಸಾಂತ್ವನಹೇಳುವುದಾಗಿತಿಳಿಸಿದ್ದಾರೆ.