<p><strong>ನವದೆಹಲಿ</strong>: ಕೃತಕ ಬುದ್ಧಿಮತ್ತೆಯು ವೈದ್ಯರಿಗೆ ಪರ್ಯಾಯವಾಗುವುದಿಲ್ಲ. ಈ ತಂತ್ರಜ್ಞಾನ ಬಳಸಿಕೊಂಡು ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ನೆರವು ನೀಡಬಹುದಷ್ಟೇ ಎಂದು ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಅಧ್ಯಕ್ಷ ಡಾ.ಆರ್.ವಿ. ಅಶೋಕನ್ ಹೇಳಿದ್ದಾರೆ.</p><p>ಪಿಟಿಐ ಸಂಪಾದಕರ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನವನ್ನು ಅತಿ ಹೆಚ್ಚು ಬಳಸುವುದು ವೈದ್ಯಕೀಯ ಕ್ಷೇತ್ರವಾಗಿದೆ. ಆದರೆ, ವೈದ್ಯರು ಮತ್ತು ರೋಗಿಗಳ ನಡುವಿನ ನಂಟನ್ನು ಅದು ಕಡಿತಗೊಳಿಸಲಾರದು ಎಂದಿದ್ದಾರೆ.</p><p>‘ಯಾವುದೊಂದೂ ವೈದ್ಯರಿಗೆ ಪರ್ಯಾಯ ಆಗುವುದಿಲ್ಲ. ಒಬ್ಬ ನಿತ್ರಾಣಗೊಂಡ ಅಸಹಾಯಕ ರೋಗಿಗೆ ಯಾವುದೇ ವಿಜ್ಞಾನ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ವೈದ್ಯರ ಅಕ್ಕರೆಯ ಸ್ಪರ್ಶ, ನಂಬಿಕೆ, ವೈದ್ಯರು ನೀಡುವ ಭರವಸೆ ಮಾತ್ರ ಚೇತರಿಕೆ ನೀಡಬಲ್ಲದು’ಎಂದಿದ್ದಾರೆ.</p><p>ಕೃತಕ ಬುದ್ಧಿಮತ್ತೆ, ಟೆಲಿ ಮೆಡಿಸಿನ್, ರೊಬಾಟಿಕ್ ಸರ್ಜರಿ ವೈದ್ಯಕೀಯ ಕ್ಷೇತ್ರದ ಉನ್ನತಿಗೆ ಬಹಳ ಕೊಡುಗೆ ನೀಡಿವೆ. ಆದರೆ, ಇವೆಲ್ಲದರ ನಡುವೆ ವೈದ್ಯರು ಇದ್ದೇ ಇರುತ್ತಾರೆ ಎಂದು ಅಶೋಕನ್ ಹೇಳಿದ್ದಾರೆ.</p><p>‘ಔಷಧಿ ಕಲೆಯು ಔಷಧ ವಿಜ್ಞಾನಕ್ಕಿಂತ ದೊಡ್ಡದು ಎಂದು ನಾವು ನಂಬಿದ್ದೇವೆ’ಎಂದು ಅವರು ಹೇಳಿದ್ದಾರೆ.</p><p>ವೈದ್ಯರ ಮೇಲೆ ಹಿಂಸಾತ್ಮಕ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೊಂದು ಕೇಂದ್ರೀಕೃತ ಕಾನೂನು ಅಗತ್ಯವಿದೆ ಎಂದಿದ್ದಾರೆ.</p><p>‘ವೈದ್ಯರ ಮೇಲಿನ ದಾಳಿಗಳು ಸಾಮಾನ್ಯವಾಗಿಬಿಟ್ಟಿದ್ದು, ಇದಕ್ಕೆ ಕಾರಣ ವೈದ್ಯರ ಮೇಲಿರುವ ಅಧಿಕ ನಿರೀಕ್ಷೆ. ವೈಮಾನಿಕ ಸಿಬ್ಬಂದಿ ರಕ್ಷಣೆಗೆ ಕಾನೂನು ಇದೆ. ವೈಮಾನಿಕ ಸಿಬ್ಬಂದಿ ದೇಶಕ್ಕೆ ಬಹಳ ವಿಶೇಷವೇ? ನಮಗೂ ಕಾನೂನಿನ ರಕ್ಷಣೆ ಕೊಡಿ’ ಎಂದು ಒತ್ತಾಯಿಸಿದ್ದಾರೆ.</p><p>ವೈದ್ಯರ ಮೇಲಿನ ದಾಳಿಗಳ ತಡೆಗೆ 23 ರಾಜ್ಯಗಳು ಕಾನೂನು ಜಾರಿ ಮಾಡಿವೆ. ವಾಸ್ತವವಾಗಿ ಅವು ಅಪ್ರಯೋಜಕವಾಗಿದೆ ಎಂದೂ ಅವರು ಹೇಳಿದ್ದಾರೆ.</p><p>AI cannot replace doctors, says IMA chief</p><p><strong>ನವದೆಹಲಿ</strong>: ಕೃತಕ ಬುದ್ಧಿಮತ್ತೆಯು ವೈದ್ಯರಿಗೆ ಪರ್ಯಾಯವಾಗುವುದಿಲ್ಲ. ಈ ತಂತ್ರಜ್ಞಾನ ಬಳಸಿಕೊಂಡು ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ನೆರವು ನೀಡಬಹುದಷ್ಟೇ ಎಂದು ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಅಧ್ಯಕ್ಷ ಡಾ.ಆರ್.ವಿ. ಅಶೋಕನ್ ಹೇಳಿದ್ದಾರೆ.</p><p>ಪಿಟಿಐ ಸಂಪಾದಕರ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನವನ್ನು ಅತಿ ಹೆಚ್ಚು ಬಳಸುವುದು ವೈದ್ಯಕೀಯ ಕ್ಷೇತ್ರವಾಗಿದೆ. ಆದರೆ, ವೈದ್ಯರು ಮತ್ತು ರೋಗಿಗಳ ನಡುವಿನ ನಂಟನ್ನು ಅದು ಕಡಿತಗೊಳಿಸಲಾರದು ಎಂದಿದ್ದಾರೆ.</p><p>‘ಯಾವುದೊಂದೂ ವೈದ್ಯರಿಗೆ ಪರ್ಯಾಯ ಆಗುವುದಿಲ್ಲ. ಒಬ್ಬ ನಿತ್ರಾಣಗೊಂಡ ಅಸಹಾಯಕ ರೋಗಿಗೆ ಯಾವುದೇ ವಿಜ್ಞಾನ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ವೈದ್ಯರ ಅಕ್ಕರೆಯ ಸ್ಪರ್ಶ, ನಂಬಿಕೆ, ವೈದ್ಯರು ನೀಡುವ ಭರವಸೆ ಮಾತ್ರ ಚೇತರಿಕೆ ನೀಡಬಲ್ಲದು’ಎಂದಿದ್ದಾರೆ.</p><p>ಕೃತಕ ಬುದ್ಧಿಮತ್ತೆ, ಟೆಲಿ ಮೆಡಿಸಿನ್, ರೊಬಾಟಿಕ್ ಸರ್ಜರಿ ವೈದ್ಯಕೀಯ ಕ್ಷೇತ್ರದ ಉನ್ನತಿಗೆ ಬಹಳ ಕೊಡುಗೆ ನೀಡಿವೆ ಆದರೆ, ಇವೆಲ್ಲದರ ನಡುವೆ ವೈದ್ಯರು ಇದ್ದೇ ಇರುತ್ತಾರೆ ಎಂದು ಅಶೋಕನ್ ಹೇಳಿದ್ದಾರೆ.</p><p>‘ಔಷಧಿ ಕಲೆಯು ಔಷಧ ವಿಜ್ಞಾನಕ್ಕಿಂತ ದೊಡ್ಡದು ಎಂದು ನಾವು ನಂಬಿದ್ದೇವೆ’ಎಂದು ಅವರು ಹೇಳಿದ್ದಾರೆ.</p><p>ವೈದ್ಯರ ಮೇಲೆ ಹಿಂಸಾತ್ಮಕ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೊಂದು ಕೇಂದ್ರೀಕೃತ ಕಾನೂನು ಅಗತ್ಯವಿದೆ ಎಂದಿದ್ದಾರೆ.</p><p>‘ವೈದ್ಯರ ಮೇಲಿನ ದಾಳಿಗಳು ಸಾಮಾನ್ಯವಾಗಿಬಿಟ್ಟಿದ್ದು, ಇದಕ್ಕೆ ಕಾರಣ ವೈದ್ಯರ ಮೇಲಿರುವ ಅಧಿಕ ನಿರೀಕ್ಷೆ. ವೈಮಾನಿಕ ಸಿಬ್ಬಂದಿ ರಕ್ಷಣೆಗೆ ಕಾನೂನು ಇದೆ. ವೈಮಾನಿಕ ಸಿಬ್ಬಂದಿ ದೆಶಕ್ಕೆ ಬಹಳ ವಿಸೇಷವೇ? ನಮಗೂ ಕಾನೂನಿನ ರಕ್ಷಣೆ ಕೊಡಿ’ ಎಂದು ಒತ್ತಾಯಿಸಿದ್ದಾರೆ.</p><p>ವೈದ್ಯರ ಮೇಲಿನ ದಾಳಿಗಳ ತಡೆಗೆ 23 ರಾಜ್ಯಗಳು ಕಾನೂನು ಜಾರಿ ಮಾಡಿವೆ. ವಾಸ್ತವವಾಗಿ ಅವು ಅಪ್ರಯೋಜಕವಾಗಿದೆ ಎಂದೂ ಅವರು ಹೇಳಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕೃತಕ ಬುದ್ಧಿಮತ್ತೆಯು ವೈದ್ಯರಿಗೆ ಪರ್ಯಾಯವಾಗುವುದಿಲ್ಲ. ಈ ತಂತ್ರಜ್ಞಾನ ಬಳಸಿಕೊಂಡು ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ನೆರವು ನೀಡಬಹುದಷ್ಟೇ ಎಂದು ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಅಧ್ಯಕ್ಷ ಡಾ.ಆರ್.ವಿ. ಅಶೋಕನ್ ಹೇಳಿದ್ದಾರೆ.</p><p>ಪಿಟಿಐ ಸಂಪಾದಕರ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನವನ್ನು ಅತಿ ಹೆಚ್ಚು ಬಳಸುವುದು ವೈದ್ಯಕೀಯ ಕ್ಷೇತ್ರವಾಗಿದೆ. ಆದರೆ, ವೈದ್ಯರು ಮತ್ತು ರೋಗಿಗಳ ನಡುವಿನ ನಂಟನ್ನು ಅದು ಕಡಿತಗೊಳಿಸಲಾರದು ಎಂದಿದ್ದಾರೆ.</p><p>‘ಯಾವುದೊಂದೂ ವೈದ್ಯರಿಗೆ ಪರ್ಯಾಯ ಆಗುವುದಿಲ್ಲ. ಒಬ್ಬ ನಿತ್ರಾಣಗೊಂಡ ಅಸಹಾಯಕ ರೋಗಿಗೆ ಯಾವುದೇ ವಿಜ್ಞಾನ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ವೈದ್ಯರ ಅಕ್ಕರೆಯ ಸ್ಪರ್ಶ, ನಂಬಿಕೆ, ವೈದ್ಯರು ನೀಡುವ ಭರವಸೆ ಮಾತ್ರ ಚೇತರಿಕೆ ನೀಡಬಲ್ಲದು’ಎಂದಿದ್ದಾರೆ.</p><p>ಕೃತಕ ಬುದ್ಧಿಮತ್ತೆ, ಟೆಲಿ ಮೆಡಿಸಿನ್, ರೊಬಾಟಿಕ್ ಸರ್ಜರಿ ವೈದ್ಯಕೀಯ ಕ್ಷೇತ್ರದ ಉನ್ನತಿಗೆ ಬಹಳ ಕೊಡುಗೆ ನೀಡಿವೆ. ಆದರೆ, ಇವೆಲ್ಲದರ ನಡುವೆ ವೈದ್ಯರು ಇದ್ದೇ ಇರುತ್ತಾರೆ ಎಂದು ಅಶೋಕನ್ ಹೇಳಿದ್ದಾರೆ.</p><p>‘ಔಷಧಿ ಕಲೆಯು ಔಷಧ ವಿಜ್ಞಾನಕ್ಕಿಂತ ದೊಡ್ಡದು ಎಂದು ನಾವು ನಂಬಿದ್ದೇವೆ’ಎಂದು ಅವರು ಹೇಳಿದ್ದಾರೆ.</p><p>ವೈದ್ಯರ ಮೇಲೆ ಹಿಂಸಾತ್ಮಕ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೊಂದು ಕೇಂದ್ರೀಕೃತ ಕಾನೂನು ಅಗತ್ಯವಿದೆ ಎಂದಿದ್ದಾರೆ.</p><p>‘ವೈದ್ಯರ ಮೇಲಿನ ದಾಳಿಗಳು ಸಾಮಾನ್ಯವಾಗಿಬಿಟ್ಟಿದ್ದು, ಇದಕ್ಕೆ ಕಾರಣ ವೈದ್ಯರ ಮೇಲಿರುವ ಅಧಿಕ ನಿರೀಕ್ಷೆ. ವೈಮಾನಿಕ ಸಿಬ್ಬಂದಿ ರಕ್ಷಣೆಗೆ ಕಾನೂನು ಇದೆ. ವೈಮಾನಿಕ ಸಿಬ್ಬಂದಿ ದೇಶಕ್ಕೆ ಬಹಳ ವಿಶೇಷವೇ? ನಮಗೂ ಕಾನೂನಿನ ರಕ್ಷಣೆ ಕೊಡಿ’ ಎಂದು ಒತ್ತಾಯಿಸಿದ್ದಾರೆ.</p><p>ವೈದ್ಯರ ಮೇಲಿನ ದಾಳಿಗಳ ತಡೆಗೆ 23 ರಾಜ್ಯಗಳು ಕಾನೂನು ಜಾರಿ ಮಾಡಿವೆ. ವಾಸ್ತವವಾಗಿ ಅವು ಅಪ್ರಯೋಜಕವಾಗಿದೆ ಎಂದೂ ಅವರು ಹೇಳಿದ್ದಾರೆ.</p><p>AI cannot replace doctors, says IMA chief</p><p><strong>ನವದೆಹಲಿ</strong>: ಕೃತಕ ಬುದ್ಧಿಮತ್ತೆಯು ವೈದ್ಯರಿಗೆ ಪರ್ಯಾಯವಾಗುವುದಿಲ್ಲ. ಈ ತಂತ್ರಜ್ಞಾನ ಬಳಸಿಕೊಂಡು ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ನೆರವು ನೀಡಬಹುದಷ್ಟೇ ಎಂದು ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಅಧ್ಯಕ್ಷ ಡಾ.ಆರ್.ವಿ. ಅಶೋಕನ್ ಹೇಳಿದ್ದಾರೆ.</p><p>ಪಿಟಿಐ ಸಂಪಾದಕರ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನವನ್ನು ಅತಿ ಹೆಚ್ಚು ಬಳಸುವುದು ವೈದ್ಯಕೀಯ ಕ್ಷೇತ್ರವಾಗಿದೆ. ಆದರೆ, ವೈದ್ಯರು ಮತ್ತು ರೋಗಿಗಳ ನಡುವಿನ ನಂಟನ್ನು ಅದು ಕಡಿತಗೊಳಿಸಲಾರದು ಎಂದಿದ್ದಾರೆ.</p><p>‘ಯಾವುದೊಂದೂ ವೈದ್ಯರಿಗೆ ಪರ್ಯಾಯ ಆಗುವುದಿಲ್ಲ. ಒಬ್ಬ ನಿತ್ರಾಣಗೊಂಡ ಅಸಹಾಯಕ ರೋಗಿಗೆ ಯಾವುದೇ ವಿಜ್ಞಾನ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ವೈದ್ಯರ ಅಕ್ಕರೆಯ ಸ್ಪರ್ಶ, ನಂಬಿಕೆ, ವೈದ್ಯರು ನೀಡುವ ಭರವಸೆ ಮಾತ್ರ ಚೇತರಿಕೆ ನೀಡಬಲ್ಲದು’ಎಂದಿದ್ದಾರೆ.</p><p>ಕೃತಕ ಬುದ್ಧಿಮತ್ತೆ, ಟೆಲಿ ಮೆಡಿಸಿನ್, ರೊಬಾಟಿಕ್ ಸರ್ಜರಿ ವೈದ್ಯಕೀಯ ಕ್ಷೇತ್ರದ ಉನ್ನತಿಗೆ ಬಹಳ ಕೊಡುಗೆ ನೀಡಿವೆ ಆದರೆ, ಇವೆಲ್ಲದರ ನಡುವೆ ವೈದ್ಯರು ಇದ್ದೇ ಇರುತ್ತಾರೆ ಎಂದು ಅಶೋಕನ್ ಹೇಳಿದ್ದಾರೆ.</p><p>‘ಔಷಧಿ ಕಲೆಯು ಔಷಧ ವಿಜ್ಞಾನಕ್ಕಿಂತ ದೊಡ್ಡದು ಎಂದು ನಾವು ನಂಬಿದ್ದೇವೆ’ಎಂದು ಅವರು ಹೇಳಿದ್ದಾರೆ.</p><p>ವೈದ್ಯರ ಮೇಲೆ ಹಿಂಸಾತ್ಮಕ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೊಂದು ಕೇಂದ್ರೀಕೃತ ಕಾನೂನು ಅಗತ್ಯವಿದೆ ಎಂದಿದ್ದಾರೆ.</p><p>‘ವೈದ್ಯರ ಮೇಲಿನ ದಾಳಿಗಳು ಸಾಮಾನ್ಯವಾಗಿಬಿಟ್ಟಿದ್ದು, ಇದಕ್ಕೆ ಕಾರಣ ವೈದ್ಯರ ಮೇಲಿರುವ ಅಧಿಕ ನಿರೀಕ್ಷೆ. ವೈಮಾನಿಕ ಸಿಬ್ಬಂದಿ ರಕ್ಷಣೆಗೆ ಕಾನೂನು ಇದೆ. ವೈಮಾನಿಕ ಸಿಬ್ಬಂದಿ ದೆಶಕ್ಕೆ ಬಹಳ ವಿಸೇಷವೇ? ನಮಗೂ ಕಾನೂನಿನ ರಕ್ಷಣೆ ಕೊಡಿ’ ಎಂದು ಒತ್ತಾಯಿಸಿದ್ದಾರೆ.</p><p>ವೈದ್ಯರ ಮೇಲಿನ ದಾಳಿಗಳ ತಡೆಗೆ 23 ರಾಜ್ಯಗಳು ಕಾನೂನು ಜಾರಿ ಮಾಡಿವೆ. ವಾಸ್ತವವಾಗಿ ಅವು ಅಪ್ರಯೋಜಕವಾಗಿದೆ ಎಂದೂ ಅವರು ಹೇಳಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>