ಅಖಿಲೇಶ್ ಮತ್ತು ಜಯಂತ್ ಇಬ್ಬರೂ ರಾಮ ಮತ್ತು ಲಕ್ಷ್ಮಣರ ಹಾಗೇ ಸಹೋದರರ ರೀತಿ ಇದ್ದರು. ಅವರನ್ನು ರಾಮ, ಲಕ್ಷ್ಮಣರಂತೆ ಬಿಂಬಿಸುವುದರಲ್ಲಿ ಯಾವುದೇ ತಪ್ಪು ಇಲ್ಲ. ಜನರನ್ನು ಹೆದರಿಸುತ್ತಿದ್ದ ರಾಕ್ಷಸರನ್ನು ರಾಮ ಮತ್ತು ಲಕ್ಷ್ಮಣರು ಒಟ್ಟಿಗೆ ಸೇರಿ ಸಂಹಾರ ಮಾಡಿದಂತೆ, ದುರಾಡಳಿತಕ್ಕೆ ಹೆಸರಾಗಿರುವ ಬಿಜೆಪಿಯನ್ನು ಸೋಲಿಸಲು ಇವರಿಬ್ಬರೂ ಒಟ್ಟಾಗಿದ್ದಾರೆ ಎಂದು ಅಲಿಗಡದ ಎಸ್ಪಿ ಮುಖಂಡರೊಬ್ಬರು ಹೇಳಿದರು.