ಪ್ರಯಾಗ್ರಾಜ್: ಮಥುರಾದಲ್ಲಿರುವ ಕೃಷ್ಣ ಜನ್ಮಸ್ಥಾನ–ಶಾಹಿ ಈದ್ಗಾ ಮಸೀದಿಗೆ ಸಂಬಂಧಿಸಿದ ಪ್ರಕರಣಗಳ ಕುರಿತ ತನ್ನ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಕಾಯ್ದಿರಿಸಿದೆ.
ಕೃಷ್ಣನ ದೇವಸ್ಥಾನದ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿಯು, ಔರಂಗಜೇಬನ ಆಡಳಿತಾವಧಿಯಲ್ಲಿ ದೇವಸ್ಥಾನವನ್ನು ಧ್ವಂಸಗೊಳಿಸಿದ ಜಾಗದಲ್ಲಿ ನಿರ್ಮಾಣವಾಗಿರುವಂಥದ್ದು. ಹೀಗಾಗಿ, ಈ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಕೋರಿ ಹಲವು ಪ್ರಕರಣಗಳು ದಾಖಲಾಗಿವೆ.
ಆದರೆ, ಪ್ರಾರ್ಥನೆ ಸ್ಥಳಗಳ ಕಾಯ್ದೆ–199 ಮತ್ತು ಇತರೆ ಕಾನೂನುಗಳ ಪ್ರಕಾರ ಇಂಥ ಅರ್ಜಿಗಳನ್ನು ನಿರ್ಬಂಧಿಸುತ್ತವೆ ಎನ್ನುವುದು ಮುಸ್ಲಿಂ ಅರ್ಜಿದಾರರ ವಾದವಾಗಿದೆ.