ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರದ ಬಗ್ಗೆಯೂ ಮಾತನಾಡಿ; ಮೋದಿ ಅಭಿನಂದಿಸಿದ ರವಿ ಶಾಸ್ತ್ರಿಗೆ ಎನ್‌ಸಿಪಿ ಚಾಟಿ

Published 5 ಡಿಸೆಂಬರ್ 2023, 2:54 IST
Last Updated 5 ಡಿಸೆಂಬರ್ 2023, 2:54 IST
ಅಕ್ಷರ ಗಾತ್ರ

ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗಳಲ್ಲಿ ಗೆಲುವು ದಾಖಲಿಸಿದ ಬಿಜೆಪಿಯನ್ನು ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಅಭಿನಂದಿಸಿದ್ದಾರೆ.

ಈ ಮಧ್ಯೆ ರವಿ ಶಾಸ್ತ್ರಿಗೆ ತಿರುಗೇಟು ನೀಡಿರುವ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ಮಣಿಪುರದ ಬಗ್ಗೆಯೂ ಮಾತನಾಡಿ ಎಂದು ಚಾಟಿ ಬೀಸಿದೆ.

ನೀವೂ ಯಾವಾಗಲೂ 'ಟ್ರೇಸರ್ ಬುಲೆಟಿನ್'ನಂತೆ ಮಾತನಾಡುತ್ತೀರಿ. ಮಣಿಪುರದಲ್ಲಿ ಅನೇಕ ಅಮಾಯಕ ಜನರ ಜೀವಗಳನ್ನು ಬಲಿ ತೆಗೆದುಕೊಂಡ ಬುಲೆಟ್‌ಗಳ ಬಗ್ಗೆಯೂ ಸ್ವಲ್ಪ ಹೇಳಿ. ನಮ್ಮ ಮಹಿಳಾ ಕುಸ್ತಿಪಟುಗಳ ಹೋರಾಟ ಮತ್ತು ಬಿಜೆಪಿ ಸಂಸದನಿಂದ ನ್ಯಾಯ ಬಯಸುತ್ತಿರುವ ಮಹಿಳಾ ಕುಸ್ತಿಪಟುಗಳ ಸಂಕಷ್ಟದ ಬಗ್ಗೆಯೂ ದಯವಿಟ್ಟು ಅಭಿಪ್ರಾಯ ತಿಳಿಸಿ ಎಂದು ಎನ್‌ಸಿಪಿ ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೊ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಮೊದಲು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಧಾನಸಭೆ ಚುನಾವಣೆ ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ರವಿ ಶಾಸ್ತ್ರಿ ಅಭಿನಂದನೆ ಸಲ್ಲಿಸಿದ್ದರು. 'ಇದೊಂದು ಸಾಂಘಿಕ ಪ್ರಯತ್ನ. ಕ್ಲಿನಿಕಲ್, ಅದ್ಭುತ, ಬುಲ್ಡೋಜಿಂಗ್ ಪ್ರದರ್ಶನ' ಎಂದು ಅಭಿನಂದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT