<p><strong>ಲಖನೌ:</strong> ಉತ್ತರ ಪ್ರದೇಶದ ಉದ್ಯಮಿಯ ಬಂಧನದ ಬೆನ್ನಲ್ಲೇ, ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐ ಪರ ಕೆಲಸ ಮಾಡುತ್ತಿದ್ದ ಶಂಕೆಯ ಮೇಲೆ ರಾಂಪುರ ಜಿಲ್ಲೆಯ ನಿವಾಸಿಯನ್ನು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ವಾರಾಣಸಿಯಲ್ಲಿ ಬಂಧಿಸಿದೆ.</p><p>ಮೂಲಗಳ ಪ್ರಕಾರ, ಗುರುವಾರ ಎಟಿಎಸ್, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ತೆಹ್ರೀಕ್-ಇ-ಲಬ್ಬೈಕ್ (ಟಿಎಲ್ಪಿ) ಸದಸ್ಯನೆಂದು ಹೇಳಲಾದ ಟಫೈಲ್ ಎಂಬಾತನನ್ನು ಬಂಧಿಸಿದ್ದು, ಆತ ತನ್ನ ಪಾಕಿಸ್ತಾನದ ನಿರ್ವಾಹಕರೊಂದಿಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ.</p><p>ಟಿಎಲ್ಪಿ ನಾಯಕ ಮೌಲಾನಾ ಶಾದ್ ರಿಜ್ವಿ ಭಾಗವಾಗಿದ್ದ ವಾಟ್ಸ್ಆ್ಯಪ್ ಗುಂಪಿನಲ್ಲಿ ಟಫೈಲ್ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಈ ವಾಟ್ಸ್ಆ್ಯಪ್ ಗುಂಪಿನಲ್ಲಿ ಬಾಬರಿ ಮಸೀದಿ ಧ್ವಂಸಕ್ಕೆ ಪ್ರತೀಕಾರ ಮತ್ತು ಭಾರತದಲ್ಲಿ ಶರಿಯಾ ಕಾನೂನನ್ನು ಜಾರಿಗೆ ತರುವುದು ಸೇರಿದಂತೆ ಹಲವು ಸಂದೇಶಗಳಿವೆ.</p><p>ರಾಜ್ಘಾಟ್, ನಮೋ ಘಾಟ್, ಜ್ಞಾನವಾಪಿ ಮಸೀದಿ, ರೈಲ್ವೆ ನಿಲ್ದಾಣಗಳು ಮತ್ತು ಕೆಂಪು ಕೋಟೆಯಂತಹ ಪ್ರಮುಖ ಸ್ಥಳಗಳ ಚಿತ್ರಗಳನ್ನು ಟಫೈಲ್ ವಾಟ್ಸ್ಆ್ಯಪ್ ಗುಂಪಿನಲ್ಲಿ ಹಂಚಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತರರನ್ನು ಗುಂಪಿಗೆ ಸೇರುವಂತೆ ಆಕರ್ಷಿಸುವಲ್ಲಿಯೂ ಅವನು ಸಕ್ರಿಯನಾಗಿದ್ದನು.</p><p>ಪ್ರಾಥಮಿಕ ತನಿಖೆಯ ಪ್ರಕಾರ ಟಫೈಲ್, ಪಾಕಿಸ್ತಾನ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಪತ್ನಿ ನಫೀಸಾ ಎಂಬಾಕೆಯೊಂದಿಗೆ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ. ಟಫೈಲ್ ಗೂಢಚಾರ ಜಾಲದ ಭಾಗವಾಗಿದ್ದರು. ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದ್ದರು ಎಂಬುದು ಸ್ಪಷ್ಟವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>ಟಫೈಲ್ ವಿರುದ್ಧ ಲಖನೌದ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಟಿಎಸ್ ಈಗ ಜಾಲದ ಇತರ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದೆ.</p><p>ಕೆಲವು ದಿನಗಳ ಹಿಂದೆ, ಐಎಸ್ಐ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ರಾಂಪುರ ಜಿಲ್ಲೆಯ ತಾಂಡಾ ಪ್ರದೇಶದ ಶೆಹಜಾದ್ ಎಂದು ಗುರುತಿಸಲಾದ ಉದ್ಯಮಿಯನ್ನು ಎಟಿಎಸ್ ಬಂಧಿಸಿತ್ತು.</p><p>ಶೆಹಜಾದ್ ಹಲವಾರು ಬಾರಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದರು ಮತ್ತು ಹಲವು ಐಎಸ್ಐ ನಿರ್ವಾಹಕರೊಂದಿಗೆ ಸಂಪರ್ಕದಲ್ಲಿದ್ದರು. ಅವರ ನಿರ್ವಾಹಕರ ನಿರ್ದೇಶನದ ಮೇರೆಗೆ ಐಎಸ್ಐ ಏಜೆಂಟ್ಗಳಿಗೆ ಹಣಕಾಸು ಒದಗಿಸಿದ್ದರು.</p><p>ಕಳೆದ ಕೆಲವು ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹಲವು ಮಂದಿ ಶಂಕಿತ ಐಎಸ್ಐ 'ಏಜೆಂಟ್'ಗಳನ್ನು ಬಂಧಿಸಲಾಗಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಉತ್ತರ ಪ್ರದೇಶದ ಉದ್ಯಮಿಯ ಬಂಧನದ ಬೆನ್ನಲ್ಲೇ, ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐ ಪರ ಕೆಲಸ ಮಾಡುತ್ತಿದ್ದ ಶಂಕೆಯ ಮೇಲೆ ರಾಂಪುರ ಜಿಲ್ಲೆಯ ನಿವಾಸಿಯನ್ನು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ವಾರಾಣಸಿಯಲ್ಲಿ ಬಂಧಿಸಿದೆ.</p><p>ಮೂಲಗಳ ಪ್ರಕಾರ, ಗುರುವಾರ ಎಟಿಎಸ್, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ತೆಹ್ರೀಕ್-ಇ-ಲಬ್ಬೈಕ್ (ಟಿಎಲ್ಪಿ) ಸದಸ್ಯನೆಂದು ಹೇಳಲಾದ ಟಫೈಲ್ ಎಂಬಾತನನ್ನು ಬಂಧಿಸಿದ್ದು, ಆತ ತನ್ನ ಪಾಕಿಸ್ತಾನದ ನಿರ್ವಾಹಕರೊಂದಿಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ.</p><p>ಟಿಎಲ್ಪಿ ನಾಯಕ ಮೌಲಾನಾ ಶಾದ್ ರಿಜ್ವಿ ಭಾಗವಾಗಿದ್ದ ವಾಟ್ಸ್ಆ್ಯಪ್ ಗುಂಪಿನಲ್ಲಿ ಟಫೈಲ್ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಈ ವಾಟ್ಸ್ಆ್ಯಪ್ ಗುಂಪಿನಲ್ಲಿ ಬಾಬರಿ ಮಸೀದಿ ಧ್ವಂಸಕ್ಕೆ ಪ್ರತೀಕಾರ ಮತ್ತು ಭಾರತದಲ್ಲಿ ಶರಿಯಾ ಕಾನೂನನ್ನು ಜಾರಿಗೆ ತರುವುದು ಸೇರಿದಂತೆ ಹಲವು ಸಂದೇಶಗಳಿವೆ.</p><p>ರಾಜ್ಘಾಟ್, ನಮೋ ಘಾಟ್, ಜ್ಞಾನವಾಪಿ ಮಸೀದಿ, ರೈಲ್ವೆ ನಿಲ್ದಾಣಗಳು ಮತ್ತು ಕೆಂಪು ಕೋಟೆಯಂತಹ ಪ್ರಮುಖ ಸ್ಥಳಗಳ ಚಿತ್ರಗಳನ್ನು ಟಫೈಲ್ ವಾಟ್ಸ್ಆ್ಯಪ್ ಗುಂಪಿನಲ್ಲಿ ಹಂಚಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತರರನ್ನು ಗುಂಪಿಗೆ ಸೇರುವಂತೆ ಆಕರ್ಷಿಸುವಲ್ಲಿಯೂ ಅವನು ಸಕ್ರಿಯನಾಗಿದ್ದನು.</p><p>ಪ್ರಾಥಮಿಕ ತನಿಖೆಯ ಪ್ರಕಾರ ಟಫೈಲ್, ಪಾಕಿಸ್ತಾನ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಪತ್ನಿ ನಫೀಸಾ ಎಂಬಾಕೆಯೊಂದಿಗೆ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ. ಟಫೈಲ್ ಗೂಢಚಾರ ಜಾಲದ ಭಾಗವಾಗಿದ್ದರು. ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದ್ದರು ಎಂಬುದು ಸ್ಪಷ್ಟವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>ಟಫೈಲ್ ವಿರುದ್ಧ ಲಖನೌದ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಟಿಎಸ್ ಈಗ ಜಾಲದ ಇತರ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದೆ.</p><p>ಕೆಲವು ದಿನಗಳ ಹಿಂದೆ, ಐಎಸ್ಐ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ರಾಂಪುರ ಜಿಲ್ಲೆಯ ತಾಂಡಾ ಪ್ರದೇಶದ ಶೆಹಜಾದ್ ಎಂದು ಗುರುತಿಸಲಾದ ಉದ್ಯಮಿಯನ್ನು ಎಟಿಎಸ್ ಬಂಧಿಸಿತ್ತು.</p><p>ಶೆಹಜಾದ್ ಹಲವಾರು ಬಾರಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದರು ಮತ್ತು ಹಲವು ಐಎಸ್ಐ ನಿರ್ವಾಹಕರೊಂದಿಗೆ ಸಂಪರ್ಕದಲ್ಲಿದ್ದರು. ಅವರ ನಿರ್ವಾಹಕರ ನಿರ್ದೇಶನದ ಮೇರೆಗೆ ಐಎಸ್ಐ ಏಜೆಂಟ್ಗಳಿಗೆ ಹಣಕಾಸು ಒದಗಿಸಿದ್ದರು.</p><p>ಕಳೆದ ಕೆಲವು ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹಲವು ಮಂದಿ ಶಂಕಿತ ಐಎಸ್ಐ 'ಏಜೆಂಟ್'ಗಳನ್ನು ಬಂಧಿಸಲಾಗಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>