<p><strong>ನವದೆಹಲಿ: </strong>ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ ನಡೆದ ಹಿಂಸಾತ್ಮಕಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದ್ದವರ ವಿರುದ್ಧ ಚಾಟಿ ಬೀಸಿರುವಸೇನಾ ಮುಖ್ಯಸ್ಥ ಬಿಪಿನ್ ರಾವತ್, ನಾಯಕತ್ವದ ಪಾಠ ಮಾಡಿದ್ದಾರೆ.</p>.<p>‘ಜನರನ್ನು ತಪ್ಪದಾರಿಯಲ್ಲಿ ಮುನ್ನಡೆಸುವವನುನಾಯಕನಾಗುವುದಿಲ್ಲ.ಸಿಎಎ ವಿರುದ್ಧ ನಡೆದ ಪ್ರತಿಭಟನೆಗಳನ್ನು ಕಂಡಿದ್ದೇವೆ.ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಬಹಳಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಹಿಂಸಾತ್ಮಕ ಕೃತ್ಯಕ್ಕಾಗಿಜನರನ್ನುಬಳಸಿಕೊಂಡಿದ್ದಾರೆ. ಇದನ್ನು ನಾಯಕತ್ವ ಎನ್ನವುದಿಲ್ಲ’ ಎಂದು ಹೇಳಿದ್ದಾರೆ.<br /><br />‘ನಾಯಕತ್ವದಲ್ಲಿ ಮುಂದಾಳತ್ವ ವಹಿಸುವುದು ಸುಲಭದ ಕೆಲಸವಲ್ಲ. ನೀವು ಇಡುವ ಒಂದು ಹೆಜ್ಜೆಯನ್ನು, ಹಿಂದಿರುವ ಸಮೂಹ ಹಿಂಬಾಲಿಸುತ್ತದೆ. ಸರಿಯಾದ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿ ನಾಯಕನ ಮೇಲಿರುತ್ತದೆ. ಹಾಗಾಗಿ ನಾಯಕತ್ವ ಎನ್ನುವುದುಕಾಣಿಸುವಷ್ಟು ಸುಲಭದ ಕೆಲಸವಲ್ಲ’ ಎಂದು ತಿಳಿಸಿದರು.<br /><br />ಸೇನಾ ಮುಖ್ಯಸ್ಥರ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಎಐಎಂಇಐಎಂ ಮುಖ್ಯಸ್ಥ ಅಸಾದುದ್ದೀನ್ಓವೈಸಿ, ಸೇನಾ ಮುಖ್ಯಸ್ಥರಿಗೆ ನಾಯಕತ್ವದ ಪಾಠ ಮಾಡಿದ್ದಾರೆ.</p>.<p>‘ಒಬ್ಬರ ಕಚೇರಿಯ ಮಿತಿಗಳನ್ನು ತಿಳಿಯುವುದು ನಾಯಕತ್ವ. ನಾಗರಿಕರ ಪ್ರಾಬಲ್ಯ ಮತ್ತು ಮುಖ್ಯಸ್ಥರಾಗಿರುವ ಸಂಸ್ಥೆಯ ಸಮಗ್ರತೆ ಕಾಪಾಡಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ನಾಯಕತ್ವ ಎನಿಸುತ್ತದೆ’ ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ ನಡೆದ ಹಿಂಸಾತ್ಮಕಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದ್ದವರ ವಿರುದ್ಧ ಚಾಟಿ ಬೀಸಿರುವಸೇನಾ ಮುಖ್ಯಸ್ಥ ಬಿಪಿನ್ ರಾವತ್, ನಾಯಕತ್ವದ ಪಾಠ ಮಾಡಿದ್ದಾರೆ.</p>.<p>‘ಜನರನ್ನು ತಪ್ಪದಾರಿಯಲ್ಲಿ ಮುನ್ನಡೆಸುವವನುನಾಯಕನಾಗುವುದಿಲ್ಲ.ಸಿಎಎ ವಿರುದ್ಧ ನಡೆದ ಪ್ರತಿಭಟನೆಗಳನ್ನು ಕಂಡಿದ್ದೇವೆ.ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಬಹಳಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಹಿಂಸಾತ್ಮಕ ಕೃತ್ಯಕ್ಕಾಗಿಜನರನ್ನುಬಳಸಿಕೊಂಡಿದ್ದಾರೆ. ಇದನ್ನು ನಾಯಕತ್ವ ಎನ್ನವುದಿಲ್ಲ’ ಎಂದು ಹೇಳಿದ್ದಾರೆ.<br /><br />‘ನಾಯಕತ್ವದಲ್ಲಿ ಮುಂದಾಳತ್ವ ವಹಿಸುವುದು ಸುಲಭದ ಕೆಲಸವಲ್ಲ. ನೀವು ಇಡುವ ಒಂದು ಹೆಜ್ಜೆಯನ್ನು, ಹಿಂದಿರುವ ಸಮೂಹ ಹಿಂಬಾಲಿಸುತ್ತದೆ. ಸರಿಯಾದ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿ ನಾಯಕನ ಮೇಲಿರುತ್ತದೆ. ಹಾಗಾಗಿ ನಾಯಕತ್ವ ಎನ್ನುವುದುಕಾಣಿಸುವಷ್ಟು ಸುಲಭದ ಕೆಲಸವಲ್ಲ’ ಎಂದು ತಿಳಿಸಿದರು.<br /><br />ಸೇನಾ ಮುಖ್ಯಸ್ಥರ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಎಐಎಂಇಐಎಂ ಮುಖ್ಯಸ್ಥ ಅಸಾದುದ್ದೀನ್ಓವೈಸಿ, ಸೇನಾ ಮುಖ್ಯಸ್ಥರಿಗೆ ನಾಯಕತ್ವದ ಪಾಠ ಮಾಡಿದ್ದಾರೆ.</p>.<p>‘ಒಬ್ಬರ ಕಚೇರಿಯ ಮಿತಿಗಳನ್ನು ತಿಳಿಯುವುದು ನಾಯಕತ್ವ. ನಾಗರಿಕರ ಪ್ರಾಬಲ್ಯ ಮತ್ತು ಮುಖ್ಯಸ್ಥರಾಗಿರುವ ಸಂಸ್ಥೆಯ ಸಮಗ್ರತೆ ಕಾಪಾಡಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ನಾಯಕತ್ವ ಎನಿಸುತ್ತದೆ’ ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>