ಬನಿಹಾಲ್, ಜಮ್ಮು:ಇಲ್ಲಿನ ರಂಬನ್ ಜಿಲ್ಲೆ ಮಹುಬಲ್ನಲ್ಲಿದ್ದ ಸೇನಾ ಶಿಬಿರದಲ್ಲಿ 29 ವರ್ಷದ ಮೇಜರ್, ಸರ್ವೀಸ್ ರೈಫಲ್ನಿಂದ ಗುಂಡು ಹಾರಿಸಿಕೊಂಡು ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲತಃ ದೆಹಲಿ ನಿವಾಸಿ ಮೇಜರ್ ಪರ್ವಿಂದರ್ ಸಿಂಗ್ ಶಿಬಿರಕ್ಕೆ ಹೊಂದಿಕೊಂಡಿರುವ ವಸತಿಗೃಹದ ನಿವಾಸದಲ್ಲಿಯೇ ಗುಂಡುಹಾರಿಸಿಕೊಂಡು ಮೃತಪಟ್ಟಿದ್ದಾರೆ.
ಕಂಪನಿ ಕಮಾಂಡರ್ ಆಗಿ ಈಚೆಗೆ ಅವರು ಶಿಬಿರಕ್ಕೆ ಸೇರ್ಪಡೆಯಾಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.