ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸಾಮಾರ್ಗ ಬಿಡಲು ಮಕ್ಕಳಿಗೆ ಹೇಳಿ: ಉಗ್ರರ ಕುಟುಂಬಕ್ಕೆ ಕಾಶ್ಮೀರದ ಡಿಜಿಪಿ ಮನವಿ

Last Updated 30 ಜೂನ್ 2018, 16:29 IST
ಅಕ್ಷರ ಗಾತ್ರ

ಶ್ರೀನಗರ: ‘ಹಿಂಸಾ ಮಾರ್ಗವನ್ನು ಬಿಡುವಂತೆ ನಿಮ್ಮ ಪುತ್ರರಿಗೆ ಹೇಳಿ. ಭಯೋತ್ಪಾದನಾ ಸಂಘಟನೆ ತೊರೆದವರನ್ನು ಒಳಗೊಂಡಂತೆ ಎಲ್ಲರಿಗೂ ಪುನರ್ವಸತಿ ಸೇರಿದಂತೆ ಸಾಧ್ಯವಾದ ಎಲ್ಲ ನೆರವನ್ನೂ ನೀಡಲಾಗುವುದು’ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಎಸ್‌.ಪಿ.ವೇದ್‌ ಅವರು ಉಗ್ರಗಾಮಿ ಸಂಘಟನೆ ಸೇರಿದವರ ಕುಟುಂಬಗಳಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದಿರುವ ಅವರು, ‘ತಪ್ಪು ದಾರಿ ತುಳಿದಿರುವ ನಿಮ್ಮ ಮಕ್ಕಳಿಗೆ ಇಂದೇ ಅದರಿಂದ ಹೊರ ಬರುವಂತೆ ತಿಳಿಹೇಳಿ. ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುವುದು ನೋವಿನ ಸಂಗತಿ. ಹೀಗಾಗಿ ಹಿಂಸೆಯನ್ನು ಬಿಟ್ಟು ಮುಖ್ಯವಾಹಿನಿಗೆ ಅವರನ್ನು ತನ್ನಿ’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT