ಶ್ರೀನಗರ: ‘ಹಿಂಸಾ ಮಾರ್ಗವನ್ನು ಬಿಡುವಂತೆ ನಿಮ್ಮ ಪುತ್ರರಿಗೆ ಹೇಳಿ. ಭಯೋತ್ಪಾದನಾ ಸಂಘಟನೆ ತೊರೆದವರನ್ನು ಒಳಗೊಂಡಂತೆ ಎಲ್ಲರಿಗೂ ಪುನರ್ವಸತಿ ಸೇರಿದಂತೆ ಸಾಧ್ಯವಾದ ಎಲ್ಲ ನೆರವನ್ನೂ ನೀಡಲಾಗುವುದು’ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಎಸ್.ಪಿ.ವೇದ್ ಅವರು ಉಗ್ರಗಾಮಿ ಸಂಘಟನೆ ಸೇರಿದವರ ಕುಟುಂಬಗಳಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದಿರುವ ಅವರು, ‘ತಪ್ಪು ದಾರಿ ತುಳಿದಿರುವ ನಿಮ್ಮ ಮಕ್ಕಳಿಗೆ ಇಂದೇ ಅದರಿಂದ ಹೊರ ಬರುವಂತೆ ತಿಳಿಹೇಳಿ. ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುವುದು ನೋವಿನ ಸಂಗತಿ. ಹೀಗಾಗಿ ಹಿಂಸೆಯನ್ನು ಬಿಟ್ಟು ಮುಖ್ಯವಾಹಿನಿಗೆ ಅವರನ್ನು ತನ್ನಿ’ ಎಂದು ಮನವಿ ಮಾಡಿದ್ದಾರೆ.