’ಪ್ರವಾಹ ಪೀಡಿತಪಚೋನಿಜರ್ ಮಧುಪುರ್ ಗ್ರಾಮಕ್ಕೆ ಭಾನುವಾರ ರಾತ್ರಿ ಕಂಪುರ್ ಪೊಲೀಸ್ ಠಾಣಾಧಿಕಾರಿ ಸಮ್ಮುಜಲ್ ಕಾಕೋಟಿ ಅವರು ನಾಲ್ವರು ಸಿಬ್ಬಂದಿಯೊಂದಿಗೆ ದೋಣಿಯಲ್ಲಿ ತೆರಳಿದ್ದರು.ಆದರೆ, ಪೊಲೀಸರು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋದರು. ಇಬ್ಬರು ಪೊಲೀಸರನ್ನು ರಕ್ಷಿಸಲಾಗಿದೆ. ಎಸ್ಡಿಆರ್ಎಫ್ ಸಿಬ್ಬಂದಿ ಹಲವು ತಾಸು ಹುಡುಕಾಟದ ನಂತರ ಸೋಮವಾರ ಮುಂಜಾನೆ ಕಾಕೋಟಿ ಸೇರಿದಂತೆ ಇಬ್ಬರ ಮೃತದೇಹಗಳನ್ನು ಹೊರತೆಗೆದರು‘ ಎಂದು ಡಿಜಿಪಿ ಜಿ.ಪಿ.ಸಿಂಗ್ ತಿಳಿಸಿದರು.