ಆರೋಪಿಗಳು ಕ್ರಿಕೆಟ್ ಆಡುತ್ತಿದ್ದರು. ಆ ವೇಳೆ ಸಂತ್ರಸ್ತ ಕಿರಿತ್ ಅವರ ಎಂಟು ವರ್ಷದ ಪುತ್ರ ಚೆಂಡನ್ನು ತೆಗೆದುಕೊಂಡಿದ್ದರಿಂದ ಆಟಕ್ಕೆ ಅಡ್ಡಿಯಾಗಿತ್ತು. ಆಗ ಸಂಭವಿಸಿದ ಘರ್ಷಣೆ ಹಿನ್ನೆಲೆಯಲ್ಲಿ ಕಿರಿತ್ ಕುಟುಂಬದವರು ದೂರು ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ಆರೋಪಿಗಳು ಪ್ರತಿದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.