ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ವ್ಯಕ್ತಿಯ ಹೆಬ್ಬೆರಳು ಕತ್ತರಿಸಿದ ನಾಲ್ವರ ಸೆರೆ

Published 7 ಜೂನ್ 2023, 16:36 IST
Last Updated 7 ಜೂನ್ 2023, 16:36 IST
ಅಕ್ಷರ ಗಾತ್ರ

ಪಟ್ನಾ (ಪಿಟಿಐ): ಗುಜರಾತ್‌ನ ಪಟ್ನಾ ಜಿಲ್ಲೆಯಲ್ಲಿ ಸಂಭವಿಸಿದ ಘರ್ಷಣೆ ವೇಳೆ ದಲಿತ ವ್ಯಕ್ತಿಯ ಹೆಬ್ಬೆರಳನ್ನು ಕತ್ತರಿಸಿದ ನಾಲ್ವರು ಆರೋಪಿಗಳನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ಕಿರಿತ್ ವಂಕರ್ ಹಾಗೂ ಆತನ ಸಹೋದರ ಧೀರಜ್‌ ವಂಕರ್‌ ಎಂಬುವರ ಮೇಲೆ ಮೇಲ್ವರ್ಗಕ್ಕೆ ಸೇರಿದ ಸಿದ್ಧರಾಜಸಿಂಹ ರಜಪೂತ ಸೇರಿದಂತೆ ಇತರ ಆರು ಮಂದಿ ಕತ್ತಿಗಳ ಸಮೇತ ದಾಳಿ ನಡೆಸಿದ್ದಾರೆ. ಈ ವೇಳೆ ಕಿರಿತ್‌ ಅವರ ಹೆಬ್ಬೆರಳನ್ನು ಕತ್ತರಿಸಿದ್ದಾರೆ ಎಂದು ಸ್ಥಳೀಯ ಕಕೋಶಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಕ್ರಿಕೆಟ್‌ ಆಡುತ್ತಿದ್ದರು. ಆ ವೇಳೆ ಸಂತ್ರಸ್ತ ಕಿರಿತ್‌ ಅವರ ಎಂಟು ವರ್ಷದ ಪುತ್ರ ಚೆಂಡನ್ನು ತೆಗೆದುಕೊಂಡಿದ್ದರಿಂದ ಆಟಕ್ಕೆ ಅಡ್ಡಿಯಾಗಿತ್ತು. ಆಗ ಸಂಭವಿಸಿದ ಘರ್ಷಣೆ ಹಿನ್ನೆಲೆಯಲ್ಲಿ ಕಿರಿತ್‌ ಕುಟುಂಬದವರು ದೂರು ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ಆರೋಪಿಗಳು ಪ್ರತಿದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT