ಬಾರಾಬಂಕಿ(ಉತ್ತರ ಪ್ರದೇಶ): ಪ್ರಚೋದನಾಕಾರಿ ಹೇಳಿಕೆ ಆರೋಪದ ಹಿನ್ನೆಲೆಯಲ್ಲಿ ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರ ಪೋಸ್ಟರ್ ಅನ್ನು ಅಯೊಧ್ಯೆಯ ತಪಸ್ವಿ ಛಾವನಿ ದೇವಾಲಯದ ಅರ್ಚಕ ಪರಮಹಂಸ ದಾಸ್ ಅವರು ಶುಕ್ರವಾರ ಸುಟ್ಟು ಹಾಕಿದ್ದಾರೆ. ಇವತ್ತು ಫೋಸ್ಟರ್ ಮಾತ್ರ ಸುಡಲಾಗಿದೆ. ನಾಳೆ ಪೋಸ್ಟರ್ ಬದಲು ದೇಶ ವಿರೋಧಿ ನಾಯಕರಿಗೆ ಈ ಗತಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ಇದೇವೇಳೆ, ಧರ್ಮಾಂಧರಿಂದ ಟೈಲರ್ ಹತ್ಯೆ ನಡೆದ ತಮ್ಮದೇ ಪಕ್ಷದ ಸರ್ಕಾರವಿರುವ ರಾಜಸ್ಥಾನಕ್ಕೆ ಭೇಟಿ ನೀಡದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ವಿರುದ್ಧವೂ ಕಿಡಿಕಾರಿದ್ದಾರೆ.