<p class="title"><strong>ಚಂಡಿಗಡ</strong>: ಕಳೆದ 12 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿಕೊಂಡಿದ್ದ ಬಬ್ಬರ್ ಖಲ್ಸಾ ಉಗ್ರನನ್ನು ವಶಕ್ಕೆ ಪಡೆಯುವಲ್ಲಿ ಪಂಜಾಬ್ ಪೊಲೀಸರು ಯಶಸ್ವಿಯಾಗಿದ್ದಾರೆ.</p>.<p class="title">ಮೊಹಾಲಿಯ ಡೇರಾ ಬಸ್ಸಾಯಲ್ಲಿದ್ದಚರಣ್ಜಿತ್ ಸಿಂಗ್ ಅಲಿಯಾಸ್ ಪಟಿಯಲಾವಿಯನ್ನುಪಂಜಾಬ್ ಪೊಲೀಸ್ ಇಲಾಖೆಯ ಸುಲಿಗೆ ನಿಗ್ರಹ ಕಾರ್ಯಪಡೆ ಭಾನುವಾರ ಬಂಧಿಸಿದೆ.</p>.<p class="title">ಲೂಧಿಯಾನದ ಶಿಂಗಾರ್ ಸಿನಿಮಾ ಬಾಂಬ್ ಸ್ಫೋಟ ಹಾಗೂ ಇನ್ನಿತರ ಪ್ರಕರಣಗಳ ಸಂಬಂಧ ಈ ಉಗ್ರ ಪಂಜಾಬ್ ಪೊಲೀಸರಿಗೆ ಬೇಕಾಗಿದ್ದ.ಬಬ್ಬರ್ ಖಲ್ಸಾ ಇಂಟರ್ ನ್ಯಾಷನಲ್(ಬಿಕೆಇ) ಉಗ್ರ ಸಂಘಟನೆಯಲ್ಲಿ ಈತ ಸಕ್ರಿಯ ಸದಸ್ಯನಾಗಿದ್ದ. 6 ಜನರ ಸಾವಿಗೆ ಕಾರಣವಾದ 2007ರ ಲೂಧಿಯಾನ ಸ್ಫೋಟ ಪ್ರಕರಣದಲ್ಲಿ ಇದೇ ಸಂಘಟನೆ ಭಾಗಿಯಾಗಿತ್ತು.</p>.<p class="title">ಈ ಪ್ರಕರಣದಲ್ಲಿ ಪಟಿಯಲಾವಿಯ ಜೊತೆಗಿದ್ದ ಎಲ್ಲರನ್ನೂ 2010ರಲ್ಲೇ ಬಂಧಿಸಲಾಗಿತ್ತು. ಆದರೆ ಈತ ಮಾತ್ರ ವಿವಿಧ ವೇಷಗಳನ್ನು ಬದಲಿಸಿಕೊಂಡು ಪೊಲೀಸರ ಕಣ್ತಪ್ಪಿಸಿಕೊಂಡಿದ್ದ. ಪಶ್ಚಿಮ ಬಂಗಾಳದ ಖರಗ್ಪುರದಲ್ಲಿರುವ ಗುರುದ್ವಾರದಲ್ಲಿದ್ದ ಈತ ಯಾವ ಸಂವಹನ ಸಾಧನವನ್ನೂ ಬಳಸುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಚಂಡಿಗಡ</strong>: ಕಳೆದ 12 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿಕೊಂಡಿದ್ದ ಬಬ್ಬರ್ ಖಲ್ಸಾ ಉಗ್ರನನ್ನು ವಶಕ್ಕೆ ಪಡೆಯುವಲ್ಲಿ ಪಂಜಾಬ್ ಪೊಲೀಸರು ಯಶಸ್ವಿಯಾಗಿದ್ದಾರೆ.</p>.<p class="title">ಮೊಹಾಲಿಯ ಡೇರಾ ಬಸ್ಸಾಯಲ್ಲಿದ್ದಚರಣ್ಜಿತ್ ಸಿಂಗ್ ಅಲಿಯಾಸ್ ಪಟಿಯಲಾವಿಯನ್ನುಪಂಜಾಬ್ ಪೊಲೀಸ್ ಇಲಾಖೆಯ ಸುಲಿಗೆ ನಿಗ್ರಹ ಕಾರ್ಯಪಡೆ ಭಾನುವಾರ ಬಂಧಿಸಿದೆ.</p>.<p class="title">ಲೂಧಿಯಾನದ ಶಿಂಗಾರ್ ಸಿನಿಮಾ ಬಾಂಬ್ ಸ್ಫೋಟ ಹಾಗೂ ಇನ್ನಿತರ ಪ್ರಕರಣಗಳ ಸಂಬಂಧ ಈ ಉಗ್ರ ಪಂಜಾಬ್ ಪೊಲೀಸರಿಗೆ ಬೇಕಾಗಿದ್ದ.ಬಬ್ಬರ್ ಖಲ್ಸಾ ಇಂಟರ್ ನ್ಯಾಷನಲ್(ಬಿಕೆಇ) ಉಗ್ರ ಸಂಘಟನೆಯಲ್ಲಿ ಈತ ಸಕ್ರಿಯ ಸದಸ್ಯನಾಗಿದ್ದ. 6 ಜನರ ಸಾವಿಗೆ ಕಾರಣವಾದ 2007ರ ಲೂಧಿಯಾನ ಸ್ಫೋಟ ಪ್ರಕರಣದಲ್ಲಿ ಇದೇ ಸಂಘಟನೆ ಭಾಗಿಯಾಗಿತ್ತು.</p>.<p class="title">ಈ ಪ್ರಕರಣದಲ್ಲಿ ಪಟಿಯಲಾವಿಯ ಜೊತೆಗಿದ್ದ ಎಲ್ಲರನ್ನೂ 2010ರಲ್ಲೇ ಬಂಧಿಸಲಾಗಿತ್ತು. ಆದರೆ ಈತ ಮಾತ್ರ ವಿವಿಧ ವೇಷಗಳನ್ನು ಬದಲಿಸಿಕೊಂಡು ಪೊಲೀಸರ ಕಣ್ತಪ್ಪಿಸಿಕೊಂಡಿದ್ದ. ಪಶ್ಚಿಮ ಬಂಗಾಳದ ಖರಗ್ಪುರದಲ್ಲಿರುವ ಗುರುದ್ವಾರದಲ್ಲಿದ್ದ ಈತ ಯಾವ ಸಂವಹನ ಸಾಧನವನ್ನೂ ಬಳಸುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>