<p><strong>ಲಖನೌ/ ಸಂಭಲ್</strong>: ಹಿಂಸಾಚಾರ ಪೀಡಿತ ಸಂಭಲ್ಗೆ ಹೊರಗಿನವರ ಪ್ರವೇಶವನ್ನು ಡಿಸೆಂಬರ್ 10ರವರೆಗೆ ನಿರ್ಬಂಧಿಸಿ ಅಲ್ಲಿನ ಜಿಲ್ಲಾಡಳಿತ ಆದೇಶಿಸಿದೆ.</p>.<p>ಶಾಂತಿ ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವ ಉದ್ದೇಶದಿಂದ ನಿರ್ಬಂಧವನ್ನು ವಿಸ್ತರಿಸಲಾಗಿದೆ ಎಂದು ಅದು ಹೇಳಿದೆ. ಈ ಹಿಂದೆ ವಿಧಿಸಲಾಗಿದ್ದ ನಿರ್ಬಂಧ ಶನಿವಾರಕ್ಕೆ ಕೊನೆಯಾಗಿತ್ತು.</p>.<p>ನಿರ್ಬಂಧ ವಿಸ್ತರಣೆಯಿಂದಾಗಿ ಸಂಭಲ್ನ ಸಂಸದ ಸೇರಿದಂತೆ ಸಮಾಜವಾದಿ ಪಕ್ಷದ ಮೂವರು ಸಂಸದರಿಗೆ ಸಂಭಲ್ ಪ್ರವೇಶಿಸಲು ಶನಿವಾರ ಸಾಧ್ಯವಾಗಲಿಲ್ಲ. ಅವರನ್ನು ಹಿಂಸಾಚಾರ ಪೀಡಿತ ನಗರಕ್ಕೆ ಬಾರದಂತೆ ತಡೆಯಲಾಯಿತು.</p>.<p>ಸಮಾಜವಾದಿ ಪಕ್ಷದ ಮುಜಾಫರ್ನಗರದ ಸಂಸದ ಹರೇಂದ್ರ ಮಲಿಕ್ ಅವರು ಕೈರಾನಾ ಮತ್ತು ಸಂಭಲ್ ಸಂಸದರ ಜತೆಗೆ ಗಾಜಿಯಾಬಾದ್ ಕಡೆಯಿಂದ ಸಂಭಲ್ ಪ್ರವೇಶಿಸುತ್ತಿದ್ದರು. ಆದರೆ, ಅವರನ್ನು ತಡೆಹಿಡಿಯಲಾಯಿತು.</p>.<p>‘ನಮ್ಮನ್ನು ಹೀಗೇಕೆ ತಡೆಯಲಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ವಿರೋಧ ಪಕ್ಷದ ನಾಯಕರು ಮತ್ತು ಸಂಸದರನ್ನು ಅಲ್ಲಿಗೆ ಹೋಗಲು ಏಕೆ ಬಿಡುತ್ತಿಲ್ಲ’ ಎಂದು ಮಲಿಕ್ ಪ್ರಶ್ನಿಸಿದರು.</p>.<p>ಶಾಹಿ ಜಾಮಾ ಮಸೀದಿಯ ಸಮೀಕ್ಷೆ ವಿರೋಧಿಸಿ ನಡೆದ ಹಿಂಸಾಚಾರದ ಕುರಿತು ಮಾಹಿತಿ ಸಂಗ್ರಹಿಸಲು 15 ಸದಸ್ಯರ ನಿಯೋಗ ಜಿಲ್ಲೆಗೆ ಭೇಟಿ ನೀಡಲಿದೆ ಎಂದು ಸಮಾಜವಾದಿ ಪಕ್ಷ ಈ ಹಿಂದೆ ಘೋಷಿಸಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ/ ಸಂಭಲ್</strong>: ಹಿಂಸಾಚಾರ ಪೀಡಿತ ಸಂಭಲ್ಗೆ ಹೊರಗಿನವರ ಪ್ರವೇಶವನ್ನು ಡಿಸೆಂಬರ್ 10ರವರೆಗೆ ನಿರ್ಬಂಧಿಸಿ ಅಲ್ಲಿನ ಜಿಲ್ಲಾಡಳಿತ ಆದೇಶಿಸಿದೆ.</p>.<p>ಶಾಂತಿ ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವ ಉದ್ದೇಶದಿಂದ ನಿರ್ಬಂಧವನ್ನು ವಿಸ್ತರಿಸಲಾಗಿದೆ ಎಂದು ಅದು ಹೇಳಿದೆ. ಈ ಹಿಂದೆ ವಿಧಿಸಲಾಗಿದ್ದ ನಿರ್ಬಂಧ ಶನಿವಾರಕ್ಕೆ ಕೊನೆಯಾಗಿತ್ತು.</p>.<p>ನಿರ್ಬಂಧ ವಿಸ್ತರಣೆಯಿಂದಾಗಿ ಸಂಭಲ್ನ ಸಂಸದ ಸೇರಿದಂತೆ ಸಮಾಜವಾದಿ ಪಕ್ಷದ ಮೂವರು ಸಂಸದರಿಗೆ ಸಂಭಲ್ ಪ್ರವೇಶಿಸಲು ಶನಿವಾರ ಸಾಧ್ಯವಾಗಲಿಲ್ಲ. ಅವರನ್ನು ಹಿಂಸಾಚಾರ ಪೀಡಿತ ನಗರಕ್ಕೆ ಬಾರದಂತೆ ತಡೆಯಲಾಯಿತು.</p>.<p>ಸಮಾಜವಾದಿ ಪಕ್ಷದ ಮುಜಾಫರ್ನಗರದ ಸಂಸದ ಹರೇಂದ್ರ ಮಲಿಕ್ ಅವರು ಕೈರಾನಾ ಮತ್ತು ಸಂಭಲ್ ಸಂಸದರ ಜತೆಗೆ ಗಾಜಿಯಾಬಾದ್ ಕಡೆಯಿಂದ ಸಂಭಲ್ ಪ್ರವೇಶಿಸುತ್ತಿದ್ದರು. ಆದರೆ, ಅವರನ್ನು ತಡೆಹಿಡಿಯಲಾಯಿತು.</p>.<p>‘ನಮ್ಮನ್ನು ಹೀಗೇಕೆ ತಡೆಯಲಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ವಿರೋಧ ಪಕ್ಷದ ನಾಯಕರು ಮತ್ತು ಸಂಸದರನ್ನು ಅಲ್ಲಿಗೆ ಹೋಗಲು ಏಕೆ ಬಿಡುತ್ತಿಲ್ಲ’ ಎಂದು ಮಲಿಕ್ ಪ್ರಶ್ನಿಸಿದರು.</p>.<p>ಶಾಹಿ ಜಾಮಾ ಮಸೀದಿಯ ಸಮೀಕ್ಷೆ ವಿರೋಧಿಸಿ ನಡೆದ ಹಿಂಸಾಚಾರದ ಕುರಿತು ಮಾಹಿತಿ ಸಂಗ್ರಹಿಸಲು 15 ಸದಸ್ಯರ ನಿಯೋಗ ಜಿಲ್ಲೆಗೆ ಭೇಟಿ ನೀಡಲಿದೆ ಎಂದು ಸಮಾಜವಾದಿ ಪಕ್ಷ ಈ ಹಿಂದೆ ಘೋಷಿಸಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>