<p><strong>ಶಿಲ್ಲಾಂಗ್:</strong> ಮೇಘಾಲಯದ ದಕ್ಷಿಣ ತುರಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ವಿರುದ್ಧ ಬಿಜೆಪಿ ತನ್ನ ರಾಜ್ಯ ಘಟಕದ ಉಪಾಧ್ಯಕ್ಷ ಮತ್ತು ಮಾಜಿ ಬಂಡುಕೋರ ನಾಯಕ ಬರ್ನಾರ್ಡ್ ಎನ್ ಮರಕ್ ಎಂಬುವವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಗುರುವಾರ ಘೋಷಿಸಿದೆ.</p>.<p>ಕಾನ್ರಾಡ್ ಸಂಗ್ಮಾ ವಿರುದ್ಧ ದನಿಯೆತ್ತಿದ್ದ ಬರ್ನಾರ್ಡ್ ಮರಾಕ್ ಅವರನ್ನು ಕಳೆದ ವರ್ಷ ಬಂಧಿಸಲಾಗಿತ್ತು. ತುರಾದಲ್ಲಿರುವ ಅವರ ಫಾರ್ಮ್ಹೌಸ್ನಲ್ಲಿ ಮಾನವ ಕಳ್ಳಸಾಗಣೆ ಮತ್ತು ವೇಶ್ಯಾಗೃಹವನ್ನು ನಡೆಸುತ್ತಿರುವ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ.</p>.<p>ಕಳೆದ ವರ್ಷ ಅವರ ಫಾರ್ಮ್ಹೌಸ್ನಲ್ಲಿ ಆರು ಅಪ್ರಾಪ್ತ ವಯಸ್ಕರು ಮತ್ತು 500 ಕ್ಕೂ ಹೆಚ್ಚು ಬಳಕೆಯಾಗದ ಕಾಂಡೋಮ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು.</p>.<p>ಗಾರೋ ಬುಡಕಟ್ಟು ಜನಾಂಗಕ್ಕೆ ಪ್ರತ್ಯೇಕ ರಾಜ್ಯ ಪಡೆಯುವ ಸಶಸ್ತ್ರ ಉಗ್ರಗಾಮಿ ಗುಂಪು ‘ಅಚಿಕ್ ರಾಷ್ಟ್ರೀಯ ಸ್ವಯಂ ಸೇವಕ ಮಂಡಳಿ’ಯಲ್ಲಿ ಬರ್ನಾರ್ಡ್ ಇದ್ದರು. 2014 ರಲ್ಲಿ ಶಸ್ತ್ರಾಸ್ತ್ರ ತ್ಯಜಿಸಿ, ಸಂಘಟನೆಯನ್ನು ವಿಸರ್ಜಿಸಿದ್ದರು. ಬರ್ನಾರ್ಡ್ ಅವರು ತುರಾ ಜಿಲ್ಲಾ ಪರಿಷತ್ ಸದಸ್ಯರೂ ಆಗಿದ್ದಾರೆ.</p>.<p>ಬಿಜೆಪಿಯು ಮೇಘಾಲಯ ವಿಧಾನಸಭೆಯ ಎಲ್ಲಾ 60 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಗುರುವಾರ ತನ್ನ ಎಲ್ಲಾ ಅಭ್ಯರ್ಥಿಗಳನ್ನೂ ಬಿಜೆಪಿ ಪ್ರಕಟಿಸಿದೆ. ಅದರಲ್ಲಿ ಬರ್ನಾರ್ಡ್ ಅವರ ಹೆಸರೂ ಇದೆ.</p>.<p>ಸಿಎಂ ಕಾನ್ರಾಡ್ ಸಂಗ್ಮಾ ನೇತೃತ್ವದ ‘ನ್ಯಾಷನಲ್ ಪೀಪಕ್ಸ್ ಪಾರ್ಟಿ’ಯನ್ನು ಒಳಗೊಂಡ ‘ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್’ನಿಂದ ಕಳೆದ ತಿಂಗಳು ಬಿಜೆಪಿ ಬೇರ್ಪಟ್ಟಿತ್ತು. ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿತ್ತು.</p>.<p><strong>ಇವುಗಳನ್ನೂ ಓದಿ</strong></p>.<p><a href="https://www.prajavani.net/india-news/bjp-leader-who-accused-of-running-brothel-in-meghalaya-absconding-957662.html" target="_blank">ಮೇಘಾಲಯದಲ್ಲಿ ವೇಶ್ಯಾಗೃಹ ನಡೆಸುತ್ತಿದ್ದ ಬಿಜೆಪಿ ನಾಯಕ ಪರಾರಿ: ಪೊಲೀಸರಿಂದ ಶೋಧ</a></p>.<p><a href="https://www.prajavani.net/india-news/meghalaya-cabinet-minister-4-mlas-resign-before-anouncement-of-poll-date-1007435.html" itemprop="url">ಮೇಘಾಲಯ: ಸಚಿವ, ನಾಲ್ವರು ಶಾಸಕರು ರಾಜೀನಾಮೆ </a></p>.<p><a href="https://www.prajavani.net/district/ramanagara/nrega-scheme-implementation-review-1005328.html" itemprop="url">ನರೇಗಾ: ಕನಕಪುರ ತಾಲ್ಲೂಕಿಗೆ ಮೇಘಾಲಯ ರಾಜ್ಯದ ಅಧಿಕಾರಿಗಳ ತಂಡ ಭೇಟಿ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಲ್ಲಾಂಗ್:</strong> ಮೇಘಾಲಯದ ದಕ್ಷಿಣ ತುರಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ವಿರುದ್ಧ ಬಿಜೆಪಿ ತನ್ನ ರಾಜ್ಯ ಘಟಕದ ಉಪಾಧ್ಯಕ್ಷ ಮತ್ತು ಮಾಜಿ ಬಂಡುಕೋರ ನಾಯಕ ಬರ್ನಾರ್ಡ್ ಎನ್ ಮರಕ್ ಎಂಬುವವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಗುರುವಾರ ಘೋಷಿಸಿದೆ.</p>.<p>ಕಾನ್ರಾಡ್ ಸಂಗ್ಮಾ ವಿರುದ್ಧ ದನಿಯೆತ್ತಿದ್ದ ಬರ್ನಾರ್ಡ್ ಮರಾಕ್ ಅವರನ್ನು ಕಳೆದ ವರ್ಷ ಬಂಧಿಸಲಾಗಿತ್ತು. ತುರಾದಲ್ಲಿರುವ ಅವರ ಫಾರ್ಮ್ಹೌಸ್ನಲ್ಲಿ ಮಾನವ ಕಳ್ಳಸಾಗಣೆ ಮತ್ತು ವೇಶ್ಯಾಗೃಹವನ್ನು ನಡೆಸುತ್ತಿರುವ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ.</p>.<p>ಕಳೆದ ವರ್ಷ ಅವರ ಫಾರ್ಮ್ಹೌಸ್ನಲ್ಲಿ ಆರು ಅಪ್ರಾಪ್ತ ವಯಸ್ಕರು ಮತ್ತು 500 ಕ್ಕೂ ಹೆಚ್ಚು ಬಳಕೆಯಾಗದ ಕಾಂಡೋಮ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು.</p>.<p>ಗಾರೋ ಬುಡಕಟ್ಟು ಜನಾಂಗಕ್ಕೆ ಪ್ರತ್ಯೇಕ ರಾಜ್ಯ ಪಡೆಯುವ ಸಶಸ್ತ್ರ ಉಗ್ರಗಾಮಿ ಗುಂಪು ‘ಅಚಿಕ್ ರಾಷ್ಟ್ರೀಯ ಸ್ವಯಂ ಸೇವಕ ಮಂಡಳಿ’ಯಲ್ಲಿ ಬರ್ನಾರ್ಡ್ ಇದ್ದರು. 2014 ರಲ್ಲಿ ಶಸ್ತ್ರಾಸ್ತ್ರ ತ್ಯಜಿಸಿ, ಸಂಘಟನೆಯನ್ನು ವಿಸರ್ಜಿಸಿದ್ದರು. ಬರ್ನಾರ್ಡ್ ಅವರು ತುರಾ ಜಿಲ್ಲಾ ಪರಿಷತ್ ಸದಸ್ಯರೂ ಆಗಿದ್ದಾರೆ.</p>.<p>ಬಿಜೆಪಿಯು ಮೇಘಾಲಯ ವಿಧಾನಸಭೆಯ ಎಲ್ಲಾ 60 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಗುರುವಾರ ತನ್ನ ಎಲ್ಲಾ ಅಭ್ಯರ್ಥಿಗಳನ್ನೂ ಬಿಜೆಪಿ ಪ್ರಕಟಿಸಿದೆ. ಅದರಲ್ಲಿ ಬರ್ನಾರ್ಡ್ ಅವರ ಹೆಸರೂ ಇದೆ.</p>.<p>ಸಿಎಂ ಕಾನ್ರಾಡ್ ಸಂಗ್ಮಾ ನೇತೃತ್ವದ ‘ನ್ಯಾಷನಲ್ ಪೀಪಕ್ಸ್ ಪಾರ್ಟಿ’ಯನ್ನು ಒಳಗೊಂಡ ‘ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್’ನಿಂದ ಕಳೆದ ತಿಂಗಳು ಬಿಜೆಪಿ ಬೇರ್ಪಟ್ಟಿತ್ತು. ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿತ್ತು.</p>.<p><strong>ಇವುಗಳನ್ನೂ ಓದಿ</strong></p>.<p><a href="https://www.prajavani.net/india-news/bjp-leader-who-accused-of-running-brothel-in-meghalaya-absconding-957662.html" target="_blank">ಮೇಘಾಲಯದಲ್ಲಿ ವೇಶ್ಯಾಗೃಹ ನಡೆಸುತ್ತಿದ್ದ ಬಿಜೆಪಿ ನಾಯಕ ಪರಾರಿ: ಪೊಲೀಸರಿಂದ ಶೋಧ</a></p>.<p><a href="https://www.prajavani.net/india-news/meghalaya-cabinet-minister-4-mlas-resign-before-anouncement-of-poll-date-1007435.html" itemprop="url">ಮೇಘಾಲಯ: ಸಚಿವ, ನಾಲ್ವರು ಶಾಸಕರು ರಾಜೀನಾಮೆ </a></p>.<p><a href="https://www.prajavani.net/district/ramanagara/nrega-scheme-implementation-review-1005328.html" itemprop="url">ನರೇಗಾ: ಕನಕಪುರ ತಾಲ್ಲೂಕಿಗೆ ಮೇಘಾಲಯ ರಾಜ್ಯದ ಅಧಿಕಾರಿಗಳ ತಂಡ ಭೇಟಿ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>