<p><strong>ಶ್ರೀನಗರ:</strong> ಜಮ್ಮು ಮತ್ತು ಕಾಶ್ಮೀರದ ಲೇಹ್ನಲ್ಲಿ ಪತ್ರಕರ್ತರಿಗೆ ಲಕೋಟೆಯಲ್ಲಿ ₹500ರ ನೋಟುಗಳನ್ನು ಹಾಕಿಕೊಡಲಾಗಿದೆ ಎಂಬ ಆರೋಪ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಇಲ್ಲಿನ ಲೋಕಸಭಾ ಕ್ಷೇತ್ರದ ಮತದಾನಕ್ಕೆ ಮೊದಲು ಬಿಜೆಪಿ ಪರವಾದ ವರದಿಗಳನ್ನು ಪ್ರಕಟಿಸಲು ಈ ಹಣ ನೀಡಲಾಗಿದೆ ಎಂದು ಕೆಲವು ಪತ್ರಕರ್ತರು ಆರೋಪಿಸಿದ್ದಾರೆ.</p>.<p>ಮಾಧ್ಯಮಗೋಷ್ಠಿಯಲ್ಲಿ ಲಕೋಟೆಗಳನ್ನು ಹಂಚಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.</p>.<p>ಈ ಲಕೋಟೆ ಹಂಚಿದ ಮಾಧ್ಯಮಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರವೀಂದರ್ ರೈನಾ ಅವರೂ ಇದ್ದರು ಎಂದು ಪತ್ರಕರ್ತೆ ರಿಂಚೆನ್ ಆಂಗ್ಮೊ ಆರೋಪಿಸಿದ್ದಾರೆ.</p>.<p>‘ಲಕೋಟೆಯಲ್ಲಿ ಏನು ಎಂದು ಪ್ರಶ್ನಿಸಿದಾಗ, ‘ಈಗ ತೆರೆಯಬೇಡಿ, ಅದು ನಮ್ಮ ಪ್ರೀತಿಯ ಸಂಕೇತ’ ಎಂದರು. ನಾನು ಪರಿಶೀಲಿಸಿದಾಗ ಲಕೋಟೆಯೊಳಗೆ ₹500ರ ಹಲವು ನೋಟುಗಳಿದ್ದವು. ಲಕೋಟೆಯನ್ನು ನಾನು ಹಿಂದಿರುಗಿಸಿದೆ. ಆದರೆ, ಅದನ್ನು ಪಡೆಯಲು ಅವರು ನಿರಾಕರಿಸಿದರು. ಅದನ್ನು ಮೇಜಿನ ಮೇಲೆ ಇಟ್ಟು ಬಂದೆ’ ಎಂದು ರಿಂಚೆನ್ ಹೇಳಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.</p>.<p>ಪತ್ರಕರ್ತರಿಗೆ ಲಂಚ ನೀಡಿದ ಬಿಜೆಪಿ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಬುಧವಾರ ಒತ್ತಾಯಿಸಿದ್ದಾರೆ.</p>.<p>ಸಿ.ಸಿ.ಟಿ.ವಿ. ಕ್ಯಾಮೆರಾದ ದೃಶ್ಯಗಳ ಆಧಾರದಲ್ಲಿ ಬಿಜೆಪಿ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒಮರ್ ಅವರು ಟ್ವೀಟ್ನಲ್ಲಿ ಹೇಳಿದ್ದಾರೆ.</p>.<p>ಲೇಹ್ ಪ್ರೆಸ್ ಕ್ಲಬ್ನ ಏಳು ಮಂದಿ ಪತ್ರಕರ್ತರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ರೈನಾ ಮತ್ತು ಬಿಜೆಪಿಯ<br />ಇನ್ನೊಬ್ಬ ಮುಖಂಡ ವಿಕ್ರಮ್ ರಾಂಧವ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಲಂಚ ನೀಡಿದ ಆರೋಪದಲ್ಲಿ ದೂರು ದಾಖಲಿಸಿಕೊಳ್ಳಬೇಕು ಎಂದು ಈ ಪತ್ರಕರ್ತರು ಒತ್ತಾಯಿಸಿದ್ದಾರೆ.</p>.<p>ಲಡಾಕ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರು ಲಂಚ ನೀಡಿದ ಆರೋಪದ ಎರಡನೇ ಪ್ರಕರಣ ಇದು.</p>.<p>ನುಬ್ರಾ ಪ್ರದೇಶದಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಹಣ ಹಂಚಲಾಗಿದೆ ಎಂಬ ಬಗ್ಗೆ ಮೇ 3ರಂದು ಪೊಲೀಸರು ದೂರು ದಾಖಲಿಸಿದ್ದಾರೆ.</p>.<p><strong>ಪಕ್ಷದ ಸಮಿತಿಯಿಂದ ತನಿಖೆ</strong></p>.<p>ಪತ್ರಕರ್ತರಿಗೆ ಲಂಚ ನೀಡಿದ ಆರೋಪದ ಬಗ್ಗೆ ತನಿಖೆ ನಡೆಸಲು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಘಟಕವು ಸಮಿತಿಯೊಂದನ್ನು ರಚಿಸಲಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವೀಂದರ್ ರೈನಾ ಹೇಳಿದ್ದಾರೆ.</p>.<p>ಪತ್ರಕರ್ತರಿಗೆ ನೀಡಿದ ಲಕೋಟೆಯಲ್ಲಿ ಆಹ್ವಾನ ಪತ್ರಿಕೆಗಳಷ್ಟೇ ಇದ್ದವು. ಅದರಲ್ಲಿ ಹಣ ಇರಲಿಲ್ಲ ಎಂದು ಪ್ರಕರಣದಲ್ಲಿ ಹೆಸರಿಸಲಾದ ಶಾಸಕರೊಬ್ಬರು ಹೇಳಿದ್ದಾರೆ.</p>.<p>ಲಂಚದ ಪ್ರಕರಣದಲ್ಲಿ ತಮ್ಮ ಹೆಸರು ಉಲ್ಲೇಖಿಸಿರುವ ಲೇಹ್ ಪ್ರೆಸ್ ಕ್ಲಬ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ರೈನಾ ಹೇಳಿದ್ದಾರೆ.</p>.<p>***</p>.<p>ಪತ್ರಕರ್ತರಿಗೆ ಲಂಚ ನೀಡುವ ದೃಶ್ಯಗಳು ಬಯಲಾಗಿವೆ. ಲಂಚ ನಿರಾಕರಿಸಿದ ಪತ್ರಕರ್ತರು ಪ್ರಾಮಾಣಿಕತೆ ಮತ್ತು ಬದ್ಧತೆಯಲ್ಲಿ ತಮ್ಮ ಸಹೋದ್ಯೋಗಿಗಳಿಗೆ ಮಾದರಿಯಾಗಿದ್ದಾರೆ. ಅವರಿಗೆ ನಮನಗಳು</p>.<p><strong>-ಒಮರ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ಮುಖಂಡ</strong></p>.<p>ಲೇಹ್ನ ಪತ್ರಕರ್ತರು ಮಾಡಿರುವ ಆರೋಪ ಆಧಾರರಹಿತ. ಕಾಶ್ಮೀರದಲ್ಲಿರುವ ಬಿಜೆಪಿ ವಿರೋಧಿ ಶಕ್ತಿಗಳು ಮತ್ತು ಕಾಂಗ್ರೆಸ್ ಈ ಆರೋಪದ ಹಿಂದಿವೆ. ಇದು ಪಕ್ಷಕ್ಕೆ ಮಸಿ ಬಳಿಯುವ ಯತ್ನ</p>.<p><strong>-ವಿಕ್ರಮ್ ರಾಂಧವ, ಬಿಜೆಪಿ ಮುಖಂಡ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ:</strong> ಜಮ್ಮು ಮತ್ತು ಕಾಶ್ಮೀರದ ಲೇಹ್ನಲ್ಲಿ ಪತ್ರಕರ್ತರಿಗೆ ಲಕೋಟೆಯಲ್ಲಿ ₹500ರ ನೋಟುಗಳನ್ನು ಹಾಕಿಕೊಡಲಾಗಿದೆ ಎಂಬ ಆರೋಪ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಇಲ್ಲಿನ ಲೋಕಸಭಾ ಕ್ಷೇತ್ರದ ಮತದಾನಕ್ಕೆ ಮೊದಲು ಬಿಜೆಪಿ ಪರವಾದ ವರದಿಗಳನ್ನು ಪ್ರಕಟಿಸಲು ಈ ಹಣ ನೀಡಲಾಗಿದೆ ಎಂದು ಕೆಲವು ಪತ್ರಕರ್ತರು ಆರೋಪಿಸಿದ್ದಾರೆ.</p>.<p>ಮಾಧ್ಯಮಗೋಷ್ಠಿಯಲ್ಲಿ ಲಕೋಟೆಗಳನ್ನು ಹಂಚಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.</p>.<p>ಈ ಲಕೋಟೆ ಹಂಚಿದ ಮಾಧ್ಯಮಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರವೀಂದರ್ ರೈನಾ ಅವರೂ ಇದ್ದರು ಎಂದು ಪತ್ರಕರ್ತೆ ರಿಂಚೆನ್ ಆಂಗ್ಮೊ ಆರೋಪಿಸಿದ್ದಾರೆ.</p>.<p>‘ಲಕೋಟೆಯಲ್ಲಿ ಏನು ಎಂದು ಪ್ರಶ್ನಿಸಿದಾಗ, ‘ಈಗ ತೆರೆಯಬೇಡಿ, ಅದು ನಮ್ಮ ಪ್ರೀತಿಯ ಸಂಕೇತ’ ಎಂದರು. ನಾನು ಪರಿಶೀಲಿಸಿದಾಗ ಲಕೋಟೆಯೊಳಗೆ ₹500ರ ಹಲವು ನೋಟುಗಳಿದ್ದವು. ಲಕೋಟೆಯನ್ನು ನಾನು ಹಿಂದಿರುಗಿಸಿದೆ. ಆದರೆ, ಅದನ್ನು ಪಡೆಯಲು ಅವರು ನಿರಾಕರಿಸಿದರು. ಅದನ್ನು ಮೇಜಿನ ಮೇಲೆ ಇಟ್ಟು ಬಂದೆ’ ಎಂದು ರಿಂಚೆನ್ ಹೇಳಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.</p>.<p>ಪತ್ರಕರ್ತರಿಗೆ ಲಂಚ ನೀಡಿದ ಬಿಜೆಪಿ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಬುಧವಾರ ಒತ್ತಾಯಿಸಿದ್ದಾರೆ.</p>.<p>ಸಿ.ಸಿ.ಟಿ.ವಿ. ಕ್ಯಾಮೆರಾದ ದೃಶ್ಯಗಳ ಆಧಾರದಲ್ಲಿ ಬಿಜೆಪಿ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒಮರ್ ಅವರು ಟ್ವೀಟ್ನಲ್ಲಿ ಹೇಳಿದ್ದಾರೆ.</p>.<p>ಲೇಹ್ ಪ್ರೆಸ್ ಕ್ಲಬ್ನ ಏಳು ಮಂದಿ ಪತ್ರಕರ್ತರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ರೈನಾ ಮತ್ತು ಬಿಜೆಪಿಯ<br />ಇನ್ನೊಬ್ಬ ಮುಖಂಡ ವಿಕ್ರಮ್ ರಾಂಧವ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಲಂಚ ನೀಡಿದ ಆರೋಪದಲ್ಲಿ ದೂರು ದಾಖಲಿಸಿಕೊಳ್ಳಬೇಕು ಎಂದು ಈ ಪತ್ರಕರ್ತರು ಒತ್ತಾಯಿಸಿದ್ದಾರೆ.</p>.<p>ಲಡಾಕ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರು ಲಂಚ ನೀಡಿದ ಆರೋಪದ ಎರಡನೇ ಪ್ರಕರಣ ಇದು.</p>.<p>ನುಬ್ರಾ ಪ್ರದೇಶದಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಹಣ ಹಂಚಲಾಗಿದೆ ಎಂಬ ಬಗ್ಗೆ ಮೇ 3ರಂದು ಪೊಲೀಸರು ದೂರು ದಾಖಲಿಸಿದ್ದಾರೆ.</p>.<p><strong>ಪಕ್ಷದ ಸಮಿತಿಯಿಂದ ತನಿಖೆ</strong></p>.<p>ಪತ್ರಕರ್ತರಿಗೆ ಲಂಚ ನೀಡಿದ ಆರೋಪದ ಬಗ್ಗೆ ತನಿಖೆ ನಡೆಸಲು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಘಟಕವು ಸಮಿತಿಯೊಂದನ್ನು ರಚಿಸಲಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವೀಂದರ್ ರೈನಾ ಹೇಳಿದ್ದಾರೆ.</p>.<p>ಪತ್ರಕರ್ತರಿಗೆ ನೀಡಿದ ಲಕೋಟೆಯಲ್ಲಿ ಆಹ್ವಾನ ಪತ್ರಿಕೆಗಳಷ್ಟೇ ಇದ್ದವು. ಅದರಲ್ಲಿ ಹಣ ಇರಲಿಲ್ಲ ಎಂದು ಪ್ರಕರಣದಲ್ಲಿ ಹೆಸರಿಸಲಾದ ಶಾಸಕರೊಬ್ಬರು ಹೇಳಿದ್ದಾರೆ.</p>.<p>ಲಂಚದ ಪ್ರಕರಣದಲ್ಲಿ ತಮ್ಮ ಹೆಸರು ಉಲ್ಲೇಖಿಸಿರುವ ಲೇಹ್ ಪ್ರೆಸ್ ಕ್ಲಬ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ರೈನಾ ಹೇಳಿದ್ದಾರೆ.</p>.<p>***</p>.<p>ಪತ್ರಕರ್ತರಿಗೆ ಲಂಚ ನೀಡುವ ದೃಶ್ಯಗಳು ಬಯಲಾಗಿವೆ. ಲಂಚ ನಿರಾಕರಿಸಿದ ಪತ್ರಕರ್ತರು ಪ್ರಾಮಾಣಿಕತೆ ಮತ್ತು ಬದ್ಧತೆಯಲ್ಲಿ ತಮ್ಮ ಸಹೋದ್ಯೋಗಿಗಳಿಗೆ ಮಾದರಿಯಾಗಿದ್ದಾರೆ. ಅವರಿಗೆ ನಮನಗಳು</p>.<p><strong>-ಒಮರ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ಮುಖಂಡ</strong></p>.<p>ಲೇಹ್ನ ಪತ್ರಕರ್ತರು ಮಾಡಿರುವ ಆರೋಪ ಆಧಾರರಹಿತ. ಕಾಶ್ಮೀರದಲ್ಲಿರುವ ಬಿಜೆಪಿ ವಿರೋಧಿ ಶಕ್ತಿಗಳು ಮತ್ತು ಕಾಂಗ್ರೆಸ್ ಈ ಆರೋಪದ ಹಿಂದಿವೆ. ಇದು ಪಕ್ಷಕ್ಕೆ ಮಸಿ ಬಳಿಯುವ ಯತ್ನ</p>.<p><strong>-ವಿಕ್ರಮ್ ರಾಂಧವ, ಬಿಜೆಪಿ ಮುಖಂಡ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>