ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಟ್ವೀಟ್ ಟ್ಯಾಗ್ ಮಾಡಿರುವ ಅವರು, ‘ಶಿವಾಜಿ ನನ್ನನ್ನು ಮಾತ್ರ ನಿಂದಿಸಿಲ್ಲ. ನಿಮ್ಮನ್ನು ಮತ್ತು ಜನಪ್ರಿಯ ನಾಯಕ, ನಿಮ್ಮ ತಂದೆ (ಎಂ. ಕರುಣಾನಿಧಿ) ಅವರನ್ನೂ ನಿಂದಿಸಿದ್ದಾರೆ. ಆದರೆ ಈ ಸತ್ಯ ನಿಮಗೆ ಅರಿವಾಗಿಲ್ಲ. ಶಿವಾಜಿಗೆ ಹೆಚ್ಚು ಅವಕಾಶ ನೀಡಿದಷ್ಟೂ ನಿಮ್ಮ ರಾಜಕೀಯ ಅವಕಾಶಗಳು ಕಡಿಮೆ ಆಗುತ್ತವೆ. ನಿಮ್ಮ ಪಕ್ಷವು ಅಸಂಸ್ಕೃತ ಗೂಂಡಾಗಳ ಆಶ್ರಯ ತಾಣವಾಗುತ್ತಿದೆ. ಇದು ತೀರಾ ಅವಮಾನಕಾರಿ’ ಎಂದು ಹೇಳಿದ್ದಾರೆ.