ಪಣಜಿ: ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರ್ರೀಕ್ಕರ್ ಅವರ ನಿಧನದಿಂದ ತೆರವಾಗಿದ್ದ ಪಣಜಿ ವಿಧಾನಸಭಾ ಕ್ಷೇತ್ರದಿಂದಸ್ಪರ್ಧಿಸಲು, ಅವರ ಮಗ ಉತ್ಪಲ್ ಪರ್ರೀಕ್ಕರ್ ಅವರಿಗೆ ಬಿಜೆಪಿ ಅವಕಾಶ ನಿರಾಕರಿಸಿದೆ. ಬದಲಿಗೆ ಮನೋಹರ್ ಅವರ ಆಪ್ತ ಸಿದ್ಧಾರ್ಥ್ ಕುನಕೋಲಿಂಕರ್ ಅವರನ್ನು ಕಣಕ್ಕೆ ಇಳಿಸಲು ಪಕ್ಷವು ನಿರ್ಧರಿಸಿದೆ.