<p><strong>ಚಿರಮಿರೀ (ಛತ್ತೀಸಗಢ):</strong> ಸಮಸ್ಯೆಗಳು ಮತ್ತು ಜನರ ಕಲ್ಯಾಣದ ಬಗ್ಗೆ ಮಾತನಾಡದ ಹಾಗೂ ಕಡು ಭ್ರಷ್ಟ ಮುಖಂಡರಿಗೆ ಬಿಜೆಪಿಯು ಪ್ರೋತ್ಸಾಹ ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗುರುವಾರ ಆರೋಪಿಸಿದರು.</p>.<p>ಬಿಜೆಪಿಯು ಜನರನ್ನು 5 ಕೆ.ಜಿ ಪಡಿತರಕ್ಕೆ ಅವಲಂಬಿತರನ್ನಾಗುವಂತೆ ಮಾಡುತ್ತಿದೆ ಎಂದಿರುವ ಅವರು, ಇದಕ್ಕೆ ಬದಲಾಗಿ ಉದ್ಯೋಗ ನೀಡಲು ಹಾಗೂ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಭರ್ತಿಗೊಳಿಸುವಂತೆ ಆಡಳಿತಾರೂಢ ಪಕ್ಷವನ್ನು ಒತ್ತಾಯಿಸುವಂತೆ ಜನರಿಗೆ ಕರೆ ನೀಡಿದರು.</p><p>ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆಸ್ತಿಯನ್ನು ಕೋಟ್ಯಧಿಪತಿಗಳಿಗೆ ಹಸ್ತಾಂತರಿಸುತ್ತಿದ್ದಾರೆ ಎಂದು ಟೀಕಿಸಿದರು.</p><p>ಮೋದಿ ಸರ್ಕಾರದ 10 ವರ್ಷಗಳ ಆಡಳಿತದಲ್ಲಿ ಜನರಿಗೆ ಅನ್ಯಾಯವಾಗಿದೆ. ಆದರೆ ಉದ್ಯಮಿಗಳು ಮತ್ತು ದೊಡ್ಡ ನಾಯಕರು ಉನ್ನತಿ ಹೊಂದಿದ್ದಾರೆ. ಜನರಿಗಾಗಿ ಕೆಲಸ ಮಾಡದಿದ್ದರೂ, ಧರ್ಮದ ಹೆಸರಿನಲ್ಲಿ ಮತ ಪಡೆಯಬಹುದು ಎಂದು ಬಿಜೆಪಿಯವರು ಭಾವಿಸಿದ್ದಾರೆ ಎಂದರು.</p><p>ಭ್ರಷ್ಟ ಮುಖಂಡರ ವಿರುದ್ಧ ಬಿಜೆಪಿಯವರು ಮೊದಲು ಆರೋಪಗಳನ್ನು ಮಾಡುತ್ತಾರೆ ಅನಂತರ ಅವರನ್ನು ತಮ್ಮ ಪಾಳಯಕ್ಕೆ ಸೇರಿಸಿಕೊಳ್ಳುತ್ತಾರೆ. ಬಿಜೆಪಿಗೆ ಸೇರಿದ ಬಳಿಕ ಆ ಮುಖಂಡರು ಪರಿಶುದ್ಧರಾಗುತ್ತಾರೆ ಮತ್ತು ಅವರ ವಿರುದ್ಧದ ಎಲ್ಲಾ ಪ್ರಕರಣಗಳು ಇಲ್ಲವಾಗುತ್ತವೆ ಎಂದು ಪ್ರಿಯಾಂಕಾ ಲೇವಡಿ ಮಾಡಿದರು.</p><p>ಬೆಲೆ ಏರಿಕೆ ಹಾಗೂ ಜ್ವಲಂತ ಸಮಸ್ಯೆಗಳ ಬಗ್ಗೆ ತುಟಿ ಬಿಚ್ಚದ ಮುಖಂಡರನ್ನು ಬಿಜೆಪಿಯು ಮುನ್ನೆಲೆಗೆ ತರುತ್ತದೆ. ಆದರೆ ಕಾಂಗ್ರೆಸ್ ಪಕ್ಷವು, ಜನರಿಗಾಗಿ ಕೆಲಸ ಮಾಡುವ ಮತ್ತು ಅವರನ್ನು ಅರ್ಥೈಸಿಕೊಳ್ಳುವ ಮುಖಂಡರಿಗೆ ಪ್ರೋತ್ಸಾಹ ನೀಡುತ್ತದೆ ಎಂದು ಹೇಳಿದರು.</p><p>ಜನರು ಸಮಸ್ಯೆಗಳಿಂದ ಬಸವಳಿಯುತ್ತಿರುವಾಗ, ಬಿಜೆಪಿ ಮುಖಂಡರು ಜಿ20 ಶೃಂಗಸಭೆಯನ್ನು ಆಯೋಜನೆ ಮಾಡಿರುವ ಕುರಿತು ಹಾಗೂ ಪಾಕಿಸ್ತಾನ, ಚೀನಾದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.</p><p>ಚುನಾವಣಾ ಬಾಂಡ್ ವಿಚಾರವಾಗಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಚುನಾವಣಾ ಬಾಂಡ್ ಯೋಜನೆಯು ಅತ್ಯಂತ ದೊಡ್ಡ ಹಗರಣವಾಗಿದೆ ಎಂದು ದೂರಿದರು.</p><p>ತಾವೊಬ್ಬರೇ ಪ್ರಾಮಾಣಿಕರು ಎಂದು ಮೋದಿ ಅವರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಜನರ ಸಮಸ್ಯೆಗಳ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡುವುದಿಲ್ಲ. ಎಷ್ಟು ಮಂದಿಗೆ ಉದ್ಯೋಗ ನೀಡಲಾಗಿದೆ, ಎಷ್ಟು ವಿಶ್ವವಿದ್ಯಾಲಯ, ಆಸ್ಪತ್ರೆ ಮತ್ತು ಶಾಲೆಗಳನ್ನು ನಿರ್ಮಿಸಲಾಗಿದೆ ಎಂಬುದನ್ನು ಹೇಳುತ್ತಿಲ್ಲ ಎಂದರು.</p><p>ಕೋವಿಡ್ ಲಸಿಕೆಯ ಪ್ರಮಾಣಪತ್ರದಲ್ಲಿ ಮೋದಿ ಅವರ ಫೋಟೊವನ್ನು ಮುದ್ರಿಸಲಾಗಿತ್ತು. ಲಸಿಕೆ ನಿರ್ಮಿಸಿರುವ ಕಂಪನಿಗಳಿಂದ ಬಿಜೆಪಿ ದೇಣಿಗೆ ಪಡೆದಿರುವುದರಿಂದ ಮೋದಿ ಅವರ ಫೋಟೊವನ್ನು ಅನಂತರ ತೆರವುಗೊಳಿಸಲಾಗಿದೆ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿರಮಿರೀ (ಛತ್ತೀಸಗಢ):</strong> ಸಮಸ್ಯೆಗಳು ಮತ್ತು ಜನರ ಕಲ್ಯಾಣದ ಬಗ್ಗೆ ಮಾತನಾಡದ ಹಾಗೂ ಕಡು ಭ್ರಷ್ಟ ಮುಖಂಡರಿಗೆ ಬಿಜೆಪಿಯು ಪ್ರೋತ್ಸಾಹ ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗುರುವಾರ ಆರೋಪಿಸಿದರು.</p>.<p>ಬಿಜೆಪಿಯು ಜನರನ್ನು 5 ಕೆ.ಜಿ ಪಡಿತರಕ್ಕೆ ಅವಲಂಬಿತರನ್ನಾಗುವಂತೆ ಮಾಡುತ್ತಿದೆ ಎಂದಿರುವ ಅವರು, ಇದಕ್ಕೆ ಬದಲಾಗಿ ಉದ್ಯೋಗ ನೀಡಲು ಹಾಗೂ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಭರ್ತಿಗೊಳಿಸುವಂತೆ ಆಡಳಿತಾರೂಢ ಪಕ್ಷವನ್ನು ಒತ್ತಾಯಿಸುವಂತೆ ಜನರಿಗೆ ಕರೆ ನೀಡಿದರು.</p><p>ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆಸ್ತಿಯನ್ನು ಕೋಟ್ಯಧಿಪತಿಗಳಿಗೆ ಹಸ್ತಾಂತರಿಸುತ್ತಿದ್ದಾರೆ ಎಂದು ಟೀಕಿಸಿದರು.</p><p>ಮೋದಿ ಸರ್ಕಾರದ 10 ವರ್ಷಗಳ ಆಡಳಿತದಲ್ಲಿ ಜನರಿಗೆ ಅನ್ಯಾಯವಾಗಿದೆ. ಆದರೆ ಉದ್ಯಮಿಗಳು ಮತ್ತು ದೊಡ್ಡ ನಾಯಕರು ಉನ್ನತಿ ಹೊಂದಿದ್ದಾರೆ. ಜನರಿಗಾಗಿ ಕೆಲಸ ಮಾಡದಿದ್ದರೂ, ಧರ್ಮದ ಹೆಸರಿನಲ್ಲಿ ಮತ ಪಡೆಯಬಹುದು ಎಂದು ಬಿಜೆಪಿಯವರು ಭಾವಿಸಿದ್ದಾರೆ ಎಂದರು.</p><p>ಭ್ರಷ್ಟ ಮುಖಂಡರ ವಿರುದ್ಧ ಬಿಜೆಪಿಯವರು ಮೊದಲು ಆರೋಪಗಳನ್ನು ಮಾಡುತ್ತಾರೆ ಅನಂತರ ಅವರನ್ನು ತಮ್ಮ ಪಾಳಯಕ್ಕೆ ಸೇರಿಸಿಕೊಳ್ಳುತ್ತಾರೆ. ಬಿಜೆಪಿಗೆ ಸೇರಿದ ಬಳಿಕ ಆ ಮುಖಂಡರು ಪರಿಶುದ್ಧರಾಗುತ್ತಾರೆ ಮತ್ತು ಅವರ ವಿರುದ್ಧದ ಎಲ್ಲಾ ಪ್ರಕರಣಗಳು ಇಲ್ಲವಾಗುತ್ತವೆ ಎಂದು ಪ್ರಿಯಾಂಕಾ ಲೇವಡಿ ಮಾಡಿದರು.</p><p>ಬೆಲೆ ಏರಿಕೆ ಹಾಗೂ ಜ್ವಲಂತ ಸಮಸ್ಯೆಗಳ ಬಗ್ಗೆ ತುಟಿ ಬಿಚ್ಚದ ಮುಖಂಡರನ್ನು ಬಿಜೆಪಿಯು ಮುನ್ನೆಲೆಗೆ ತರುತ್ತದೆ. ಆದರೆ ಕಾಂಗ್ರೆಸ್ ಪಕ್ಷವು, ಜನರಿಗಾಗಿ ಕೆಲಸ ಮಾಡುವ ಮತ್ತು ಅವರನ್ನು ಅರ್ಥೈಸಿಕೊಳ್ಳುವ ಮುಖಂಡರಿಗೆ ಪ್ರೋತ್ಸಾಹ ನೀಡುತ್ತದೆ ಎಂದು ಹೇಳಿದರು.</p><p>ಜನರು ಸಮಸ್ಯೆಗಳಿಂದ ಬಸವಳಿಯುತ್ತಿರುವಾಗ, ಬಿಜೆಪಿ ಮುಖಂಡರು ಜಿ20 ಶೃಂಗಸಭೆಯನ್ನು ಆಯೋಜನೆ ಮಾಡಿರುವ ಕುರಿತು ಹಾಗೂ ಪಾಕಿಸ್ತಾನ, ಚೀನಾದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.</p><p>ಚುನಾವಣಾ ಬಾಂಡ್ ವಿಚಾರವಾಗಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಚುನಾವಣಾ ಬಾಂಡ್ ಯೋಜನೆಯು ಅತ್ಯಂತ ದೊಡ್ಡ ಹಗರಣವಾಗಿದೆ ಎಂದು ದೂರಿದರು.</p><p>ತಾವೊಬ್ಬರೇ ಪ್ರಾಮಾಣಿಕರು ಎಂದು ಮೋದಿ ಅವರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಜನರ ಸಮಸ್ಯೆಗಳ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡುವುದಿಲ್ಲ. ಎಷ್ಟು ಮಂದಿಗೆ ಉದ್ಯೋಗ ನೀಡಲಾಗಿದೆ, ಎಷ್ಟು ವಿಶ್ವವಿದ್ಯಾಲಯ, ಆಸ್ಪತ್ರೆ ಮತ್ತು ಶಾಲೆಗಳನ್ನು ನಿರ್ಮಿಸಲಾಗಿದೆ ಎಂಬುದನ್ನು ಹೇಳುತ್ತಿಲ್ಲ ಎಂದರು.</p><p>ಕೋವಿಡ್ ಲಸಿಕೆಯ ಪ್ರಮಾಣಪತ್ರದಲ್ಲಿ ಮೋದಿ ಅವರ ಫೋಟೊವನ್ನು ಮುದ್ರಿಸಲಾಗಿತ್ತು. ಲಸಿಕೆ ನಿರ್ಮಿಸಿರುವ ಕಂಪನಿಗಳಿಂದ ಬಿಜೆಪಿ ದೇಣಿಗೆ ಪಡೆದಿರುವುದರಿಂದ ಮೋದಿ ಅವರ ಫೋಟೊವನ್ನು ಅನಂತರ ತೆರವುಗೊಳಿಸಲಾಗಿದೆ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>