<p><strong>ರಾಂಪುರ(ಉತ್ತರ ಪ್ರದೇಶ)</strong>: 12 ವರ್ಷದ ಹಿಂದಿನ ಪ್ರಕರಣವೊಂದರಲ್ಲಿ ಬಿಜೆಪಿಯ ಮಾಜಿ ಶಾಸಕ ಕಾಶಿರಾಮ್ ದಿವಾಕರ ಹಾಗೂ ಇತರ ಐದು ಜನರಿಗೆ ಇಲ್ಲಿನ ಸಂಸದರ–ಶಾಸಕರ ವಿಶೇಷ ನ್ಯಾಯಾಲಯವು 7 ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹1.01 ಲಕ್ಷ ದಂಡ ವಿಧಿಸಿ ಗುರುವಾರ ಆದೇಶಿಸಿದೆ.</p>.<p>ಪ್ರಕರಣದಲ್ಲಿ ಎಲ್ಲ ಆರು ಜನರು ತಪ್ಪಿತಸ್ಥರು ಎಂದು ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ್ ಬುಧವಾರ ಹೇಳಿದ್ದರು.</p>.<p>ಕೃಷ್ಣಪಾಲ್, ಭರತ್, ಸಂಜು ಯಾದವ್, ಮೇಘರಾಜ್ ಹಾಗೂ ಸುರೇಶ ಗುಪ್ತಾ ಶಿಕ್ಷೆಗೆ ಒಳಗಾದವರು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯವು ಇತರ 21 ಜನರನ್ನು ಖುಲಾಸೆಗೊಳಿಸಿದೆ.</p>.<p>ಕಾಶಿರಾಮ್ ದಿವಾಕರ ನೇತೃತ್ವದಲ್ಲಿ ಕೆಲ ಜನರು ಶಹಬಾದ್ನಲ್ಲಿರುವ ರಾಣಾ ಸಕ್ಕರೆ ಕಾರ್ಖಾನೆ ಮೇಲೆ ದಾಳಿ ನಡೆಸಿದ್ದರು. ಕಾರ್ಖಾನೆಯ ಆವರಣದಲ್ಲಿದ್ದ ಟ್ರ್ಯಾಕ್ಟರ್ನ ಟ್ರಾಲಿಯನ್ನು ಹೊರಗೆ ತೆಗೆದುಕೊಂಡು ಹೋಗುವ ವಿಚಾರವಾಗಿ ಉಂಟಾಗಿದ್ದ ವಿವಾದದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿದ್ದ ಕಾಶಿರಾಮ್ ಹಾಗೂ ಅವರ ಬೆಂಬಲಿಗರು ಕಾರ್ಖಾನೆಯನ್ನು ಧ್ವಂಸ ಮಾಡಿದ್ದರು ಎಂದು ಆರೋಪಿಸಲಾಗಿತ್ತು.</p>.<p>ಈ ಕುರಿತು ಕಾರ್ಖಾನೆ ಅಧ್ಯಕ್ಷ ಓಂವೀರ್ ಸಿಂಗ್ ಅವರು 2012ರ ಜನವರಿ 16ರಂದು ಪ್ರಕರಣ ದಾಖಲಿಸಿದ್ದರು.</p>.<p>ಈ ಘಟನೆಯಲ್ಲಿ ಕೆಲ ಕಾರ್ಮಿಕರು ಸಹ ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿ ಕಾಶಿರಾಮ್ ಹಾಗೂ ಇತರರ ವಿರುದ್ಧ ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಂಪುರ(ಉತ್ತರ ಪ್ರದೇಶ)</strong>: 12 ವರ್ಷದ ಹಿಂದಿನ ಪ್ರಕರಣವೊಂದರಲ್ಲಿ ಬಿಜೆಪಿಯ ಮಾಜಿ ಶಾಸಕ ಕಾಶಿರಾಮ್ ದಿವಾಕರ ಹಾಗೂ ಇತರ ಐದು ಜನರಿಗೆ ಇಲ್ಲಿನ ಸಂಸದರ–ಶಾಸಕರ ವಿಶೇಷ ನ್ಯಾಯಾಲಯವು 7 ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹1.01 ಲಕ್ಷ ದಂಡ ವಿಧಿಸಿ ಗುರುವಾರ ಆದೇಶಿಸಿದೆ.</p>.<p>ಪ್ರಕರಣದಲ್ಲಿ ಎಲ್ಲ ಆರು ಜನರು ತಪ್ಪಿತಸ್ಥರು ಎಂದು ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ್ ಬುಧವಾರ ಹೇಳಿದ್ದರು.</p>.<p>ಕೃಷ್ಣಪಾಲ್, ಭರತ್, ಸಂಜು ಯಾದವ್, ಮೇಘರಾಜ್ ಹಾಗೂ ಸುರೇಶ ಗುಪ್ತಾ ಶಿಕ್ಷೆಗೆ ಒಳಗಾದವರು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯವು ಇತರ 21 ಜನರನ್ನು ಖುಲಾಸೆಗೊಳಿಸಿದೆ.</p>.<p>ಕಾಶಿರಾಮ್ ದಿವಾಕರ ನೇತೃತ್ವದಲ್ಲಿ ಕೆಲ ಜನರು ಶಹಬಾದ್ನಲ್ಲಿರುವ ರಾಣಾ ಸಕ್ಕರೆ ಕಾರ್ಖಾನೆ ಮೇಲೆ ದಾಳಿ ನಡೆಸಿದ್ದರು. ಕಾರ್ಖಾನೆಯ ಆವರಣದಲ್ಲಿದ್ದ ಟ್ರ್ಯಾಕ್ಟರ್ನ ಟ್ರಾಲಿಯನ್ನು ಹೊರಗೆ ತೆಗೆದುಕೊಂಡು ಹೋಗುವ ವಿಚಾರವಾಗಿ ಉಂಟಾಗಿದ್ದ ವಿವಾದದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿದ್ದ ಕಾಶಿರಾಮ್ ಹಾಗೂ ಅವರ ಬೆಂಬಲಿಗರು ಕಾರ್ಖಾನೆಯನ್ನು ಧ್ವಂಸ ಮಾಡಿದ್ದರು ಎಂದು ಆರೋಪಿಸಲಾಗಿತ್ತು.</p>.<p>ಈ ಕುರಿತು ಕಾರ್ಖಾನೆ ಅಧ್ಯಕ್ಷ ಓಂವೀರ್ ಸಿಂಗ್ ಅವರು 2012ರ ಜನವರಿ 16ರಂದು ಪ್ರಕರಣ ದಾಖಲಿಸಿದ್ದರು.</p>.<p>ಈ ಘಟನೆಯಲ್ಲಿ ಕೆಲ ಕಾರ್ಮಿಕರು ಸಹ ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿ ಕಾಶಿರಾಮ್ ಹಾಗೂ ಇತರರ ವಿರುದ್ಧ ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>