<p><strong>ಮುಂಬೈ:</strong> ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಜಲ ಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಅವರ ಕುರಿತಾದ ಮಾನಹಾನಿಕರ ಎನ್ನಲಾದ 6 ವಿಡಿಯೊಗಳನ್ನು ಅಳಿಸಿ ಹಾಕುವಂತೆ ಇಬ್ಬರು ಯೂಟ್ಯೂಬರ್ಗಳಿಗೆ ಬಾಂಬೆ ಹೈಕೋರ್ಟ್ ಆದೇಶಿಸಿದೆ. </p><p>ಈ ವಿಡಿಯೊಗಳು ಮೇಲ್ನೋಟಕ್ಕೆ ಮಾನಹಾನಿಕರ ರೀತಿಯಲ್ಲಿವೆ ಎನ್ನುವ ಅರ್ಜಿದಾರರ ಅಭಿಪ್ರಾಯ ಪರಿಗಣಿಸಿ, ತಕ್ಷಣವೇ ವಿಡಿಯೊಗಳನ್ನು ಅಳಿಸಿ ಹಾಕಲು ನ್ಯಾಯಮೂರ್ತಿ ಆರೀಪ್ ಡಾಕ್ಟರ್ ಅವರ ಪೀಠವು ಯೂಟ್ಯೂಬರ್ಗಳಿಗೆ ಆದೇಶಿಸಿದೆ. </p><p>ಇನ್ನು ಮುಂದೆ, ಗಿರೀಶ್ ಮಹಾಜನ್ ಅವರಿಗೆ ಮಾನಹಾನಿ ಮಾಡುವಂತಹ ರೀತಿಯ ಪೋಟೊ ಅಥವಾ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಬಾರದು ಎಂದು ಆದೇಶಿಸಿದೆ. </p><p>ಬಿಜೆಪಿ ನಾಯಕ ಗಿರೀಶ್ ಮಹಾಜನ್ ಅವರು, ತಮ್ಮ ವಿರುದ್ಧ ನಕಲಿ ಹಾಗೂ ಮಾನಹಾನಿಯಾಗುವ ರೀತಿಯ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿ ಅನಿಲ್ ತಾಠೆ ಹಾಗೂ ಶ್ಯಾಮ್ ಗಿರಿ ಎಂಬ ಯೂಟ್ಯೂಬರ್ಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. </p><p>ಗಿರೀಶ್ ಮಹಾಜನ್ ಕುರಿತಾದ ಐದು ವಿಡಿಯೊಗಳನ್ನು 'ಅನಿಲ್ ಗಂಗಾಬೇಡಿ ತಾಠೆ' ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಪತ್ರಕರ್ತ ಹಾಗೂ ಯೂಟ್ಯೂಬರ್ ಅನಿಲ್ ತಾಠೆ ಅವರು ಹಾಕಿದ್ದರು. ಇನ್ನೊಂದು ವಿಡಿಯೊವನ್ನು ಶ್ಯಾಮ್ ಗಿರಿ ಎನ್ನುವ ಯೂಟ್ಯೂಬರ್, ' ಮುದ್ದ ಭಾರತ್ ಕಾ' ಎನ್ನುವ ಯೂಟ್ಯೂಬ್ ಚಾನೆಲ್ನಲ್ಲಿ ಹಾಕಿಕೊಂಡಿದ್ದರು.</p><p>ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ವಿಡಿಯೊಗಳನ್ನು ಅಳಿಸಿ ಹಾಕಲು ಸೂಚಿಸುವಂತೆ ಹೈಕೋರ್ಟ್ಗೆ ಮನವಿ ಮಾಡಿದ್ದರು. </p><p>ಪ್ರಕರಣದ ಕುರಿತಾದ ಮುಂದಿನ ವಿಚಾರಣೆಯು ಜೂನ್ 20ರಂದು ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಜಲ ಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಅವರ ಕುರಿತಾದ ಮಾನಹಾನಿಕರ ಎನ್ನಲಾದ 6 ವಿಡಿಯೊಗಳನ್ನು ಅಳಿಸಿ ಹಾಕುವಂತೆ ಇಬ್ಬರು ಯೂಟ್ಯೂಬರ್ಗಳಿಗೆ ಬಾಂಬೆ ಹೈಕೋರ್ಟ್ ಆದೇಶಿಸಿದೆ. </p><p>ಈ ವಿಡಿಯೊಗಳು ಮೇಲ್ನೋಟಕ್ಕೆ ಮಾನಹಾನಿಕರ ರೀತಿಯಲ್ಲಿವೆ ಎನ್ನುವ ಅರ್ಜಿದಾರರ ಅಭಿಪ್ರಾಯ ಪರಿಗಣಿಸಿ, ತಕ್ಷಣವೇ ವಿಡಿಯೊಗಳನ್ನು ಅಳಿಸಿ ಹಾಕಲು ನ್ಯಾಯಮೂರ್ತಿ ಆರೀಪ್ ಡಾಕ್ಟರ್ ಅವರ ಪೀಠವು ಯೂಟ್ಯೂಬರ್ಗಳಿಗೆ ಆದೇಶಿಸಿದೆ. </p><p>ಇನ್ನು ಮುಂದೆ, ಗಿರೀಶ್ ಮಹಾಜನ್ ಅವರಿಗೆ ಮಾನಹಾನಿ ಮಾಡುವಂತಹ ರೀತಿಯ ಪೋಟೊ ಅಥವಾ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಬಾರದು ಎಂದು ಆದೇಶಿಸಿದೆ. </p><p>ಬಿಜೆಪಿ ನಾಯಕ ಗಿರೀಶ್ ಮಹಾಜನ್ ಅವರು, ತಮ್ಮ ವಿರುದ್ಧ ನಕಲಿ ಹಾಗೂ ಮಾನಹಾನಿಯಾಗುವ ರೀತಿಯ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿ ಅನಿಲ್ ತಾಠೆ ಹಾಗೂ ಶ್ಯಾಮ್ ಗಿರಿ ಎಂಬ ಯೂಟ್ಯೂಬರ್ಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. </p><p>ಗಿರೀಶ್ ಮಹಾಜನ್ ಕುರಿತಾದ ಐದು ವಿಡಿಯೊಗಳನ್ನು 'ಅನಿಲ್ ಗಂಗಾಬೇಡಿ ತಾಠೆ' ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಪತ್ರಕರ್ತ ಹಾಗೂ ಯೂಟ್ಯೂಬರ್ ಅನಿಲ್ ತಾಠೆ ಅವರು ಹಾಕಿದ್ದರು. ಇನ್ನೊಂದು ವಿಡಿಯೊವನ್ನು ಶ್ಯಾಮ್ ಗಿರಿ ಎನ್ನುವ ಯೂಟ್ಯೂಬರ್, ' ಮುದ್ದ ಭಾರತ್ ಕಾ' ಎನ್ನುವ ಯೂಟ್ಯೂಬ್ ಚಾನೆಲ್ನಲ್ಲಿ ಹಾಕಿಕೊಂಡಿದ್ದರು.</p><p>ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ವಿಡಿಯೊಗಳನ್ನು ಅಳಿಸಿ ಹಾಕಲು ಸೂಚಿಸುವಂತೆ ಹೈಕೋರ್ಟ್ಗೆ ಮನವಿ ಮಾಡಿದ್ದರು. </p><p>ಪ್ರಕರಣದ ಕುರಿತಾದ ಮುಂದಿನ ವಿಚಾರಣೆಯು ಜೂನ್ 20ರಂದು ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>