ಮತಾಂತರಗೊಂಡಿರುವ ದಲಿತರಿಗೆ ಎಸ್ಸಿ ಸ್ಥಾನಮಾನ ನೀಡಬೇಕೊ ಬೇಡವೊ ಎಂಬುದರ ಕುರಿತು ಪರಾಮರ್ಶೆ ನಡೆಸುವುದಕ್ಕಾಗಿ ಕೇಂದ್ರ ಸರ್ಕಾರವು ಆಯೋಗವೊಂದನ್ನು ರಚಿಸಿತ್ತು. ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣ ಅವರನ್ನು ಇದರ ಮುಖ್ಯಸ್ಥರನ್ನಾಗಿ ನೇಮಿಸಿತ್ತು. ಇದನ್ನು ವಿರೋಧಿಸಿ ನ್ಯಾಷನಲ್ ಕಾನ್ಫೆಡರೇಷನ್ ಆಫ್ ದಲಿತ್ ಆ್ಯಂಡ್ ಆದಿವಾಸಿ ಆರ್ಗನೈಸೇಷನ್ (ಎನ್ಎಸಿಡಿಎಒಆರ್) ಅಭಿಯಾನ ಕೈಗೊಂಡಿದೆ.