ಹಿಂಸಾಚಾರದಲ್ಲಿ ದೆಹಲಿ ಪೊಲೀಸರ ಪಾತ್ರ ಹಾಗೂ ಹಾನಿಯ ಮೊತ್ತವನ್ನು ಅವರಿಂದ ವಸೂಲಿ ಮಾಡುವ ಕುರಿತಂತೆ ತನಿಖಾ ತಂಡವನ್ನು ಸರ್ಕಾರ ರಚಿಸಲಿದೆಯೇ ಎಂದು ಸಚಿವರಿಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಅವರು, ‘ಇಂತಹ ಘಟನೆಗಳಲ್ಲಿ ಸತ್ಯಾಂಶಗಳು ಹಾಗೂ ಸಾಕ್ಷ್ಯಗಳು ಇರುತ್ತವೆ. ಯಾರು ಹೊಣೆಗಾರರು ಎಂದು ಈಗಲೇ ಹೇಳುವುದು ಆತುರದ ನಿರ್ಧಾರವಾಗುತ್ತದೆ. ತಪ್ಪಿತಸ್ಥರನ್ನು ಶಿಕ್ಷೆಯ ಪರಿಧಿಗೆ ತರುವುದಾಗಿ ಗೃಹಸಚಿವಾಲಯ ಈಗಾಗಲೇ ಭರವಸೆ ನೀಡಿದೆ’ ಎಂದಿದ್ದಾರೆ.