ಪಣಜಿ: ಗೋವಾ ಮತ್ತು ಕರ್ನಾಟಕ ಗಡಿಯಲ್ಲಿ ಕೈಗೊಂಡಿರುವ ಜೋಡಿ ರೈಲು ಮಾರ್ಗ, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಹಾಗೂ ವಿದ್ಯುತ್ ಮಾರ್ಗ ಯೋಜನೆಗಳನ್ನು ಪ್ರತ್ಯೇಕವಾಗಿಯೇ ನೋಡಬೇಕು. ಅವುಗಳನ್ನು ಒಂದೇ ಎಂದು ಪರಿಗಣಿಸಿ, ಅದರಿಂದಾಗುವ ಪರಿಣಾಮಗಳ ಮೌಲ್ಯಮಾಪನ ಮಾಡುವುದು ಸಲ್ಲ ಎಂದು ಗೋವಾ ಸಚಿವ ನೀಲೇಶ್ ಕಾಬ್ರಾಲ್ ಬುಧವಾರ ಹೇಳಿದರು.