2018ರ ಅಕ್ಟೋಬರ್ನಿಂದ 2019ರ ಏಪ್ರಿಲ್ವರೆಗೂ ಜಿಎಸ್ಟಿ ನಂಬರ್ ಇಲ್ಲದ 31 ನಕಲಿ ರಸೀದಿಗಳಿಗೆ ರೈಲ್ವೆ ಇಲಾಖೆಯು ಹಣ ಬಿಡುಗಡೆ ಮಾಡಿದೆ ಎಂಬ ಆರೋಪ ಇದೆ. ಗಣೇಶ್ ಕುಮಾರ್ ಮತ್ತು ಇಲಾಖೆಯ ಕೆಲವರು ಪಿತೂರಿ ನಡೆಸಿ ನಕಲಿ ರಸೀದಿಗಳನ್ನು ಸೃಷ್ಟಿಸಿರುವುದರ ಜತೆಗೆ, ಅವುಗಳಿಗೆ ಹಣ ಬಿಡುಗಡೆಯಾಗುವಂತೆ ನೋಡಿಕೊಂಡಿದ್ದಾರೆ. ಈ ನಕಲಿ ಸಂಸ್ಥೆಗಳು ಆ್ಯಕ್ಸಿಸ್ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದು, ಹಣ ಅಲ್ಲಿಗೆ ಜಮೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.